ಬಳ್ಳಾರಿ / ಕಂಪ್ಲಿ : ಪಟ್ಟಣದ ಕಂಪ್ಲಿ ಹಾಗೂ ಗಂಗಾವತಿ ರಾಜ್ಯ ಹೆದ್ದಾರಿ 29ರ ಹಳೆ ಚೆಕ್ ಪೋಸ್ಟ್ ಹತ್ತಿರ ನೀರಿನ ಪೈಪ್ ಒಡೆದು ರಸ್ತೆ ಮೇಲೆ ಹರಿದು ಆಳೆತ್ತರದ ನೀರಿನ ಗುಂಡಿ ನಿರ್ಮಾಣವಾಗಿದೆ, ಈ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿ, ಬಸ್, ಕಾರು, ದ್ವಿಚಕ್ರ ವಾಹನಗಳು ದಿನಂಪ್ರತಿ ನೂರಾರು ವಾಹನಗಳು ಚಲಿಸುತ್ತವೆ.
ಈ ಅಳೆತರದ ನೀರಿನ ಗುಂಡಿ ನಿರ್ಮಾಣಗೊಂಡು ಪ್ರಯಣಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದೆ ಅನೇಕ ದಿನಗಳು ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪ್ರತಿದಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ.
ಪ್ರತಿದಿನ ರಸ್ತೆಯಲ್ಲಿ ಭಾರಿ ವಾಹನಗಳು ಚಲಿಸುತ್ತವೆ, ಈ ಗುಂಡಿ ದೊಡ್ಡ ಗುಂಡಿಯಾಗಿ ರೂಪಗೊಳ್ಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ನೀರಿನ ಪೈಪ್ ಲೈನ್ ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಗುಂಡಿಯನ್ನು ಮುಚ್ಚಬೇಕೆಂದು ಜನರು ಒತ್ತಾಯಿಸಿದ್ದಾರೆ.
ರಾತ್ರಿಯ ವೇಳೆ ಬೆಳಕಿನ ಸರಿಯಾದ ವ್ಯವಸ್ತೆ ಇಲ್ಲದೆ ಇರುವುದರಿಂದ ವಾಹನ ಸವಾರರು ಒಂದು ವೇಳೆ ಗುಂಡಿಯಲ್ಲಿ ಬಿದ್ದು ಗಾಯಗೊಂಡು ಅಥವಾ ಸಾವನ್ನಪ್ಪಿದ್ದರೆ ಯಾರು ಹೊಣೆ?
” ನೀರಿನ ಪೈಪ್ ಲೈನ್ ಒಡೆದು ರಸ್ತೆ ಮೇಲೆ ಹರಿಯುತ್ತಿರುವ ನೀರನ್ನು ಆದಷ್ಟು ಬೇಗನೆ ಪೈಪ್ ಲೈನ್ ದುರಸ್ತಿಗೊಳಿಸಿ ರಸ್ತೆ ಸರಿಪಡಿಸಲಾಗುವುದು “.
- ಬಿ. ಮಲ್ಲಿಕಾರ್ಜುನ
ಮುಖ್ಯಾಧಿಕಾರಿ, ಪುರಸಭೆ ಕಂಪ್ಲಿ.
” ರಾಜ್ಯ ಹೆದ್ದಾರಿ 29ರ ಸಂಪರ್ಕ ಸೇತುವೆ ಕಾಮಗಾರಿಯಿಂದಾಗಿ ನೀರಿನ ಪೈಪ್ ಲೈನ್ ಹೊಡೆದಿದ್ದು ಸೇತುವೆ ಕಾಮಗಾರಿ ಮುಗಿದ ತಕ್ಷಣವೇ ಪೈಪ್ ಲೈನ್ ದುರಸ್ತಿಗೊಳಿಸಲಾಗುವುದು “.
- ತೇಜಸ್ವಿನಿ,
ಕಿರಿಯ ಅಭಿಯಂತರು, ಪುರಸಭೆ, ಕಂಪ್ಲಿ.



















