ಬೆಂಗಳೂರು: ನಗರದಲ್ಲಿ ನಿನ್ನೆ ಪರಿಸರ ಸಂರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ‘ಗ್ರೀನ್ ಪಾತ್’ ಸಂಸ್ಥೆಯ ವತಿಯಿಂದ ದಿ.28-6-2026 ರಂದು ಹಮ್ಮಿಕೊಳ್ಳುವ ‘ರನ್ ಫಾರ್ ಟ್ರೀಸ್’ (Run for Trees) ಅಭಿಯಾನದ ಟೀ ಷರ್ಟ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಮಾಲಿನ್ಯಕ್ಕೆ ಬ್ರೇಕ್ ಹಾಕಲು ಹಸಿರೀಕರಣವೇ ಏಕೈಕ ಮಾರ್ಗ ಎಂಬ ಸಂದೇಶದೊಂದಿಗೆ ಈ ಓಟವನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡು ಹಸಿರು ಬೆಳೆಸುವ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಚೀಫ್ ಟ್ರಾಫಿಕ್ ವಾರ್ಡನ್ ಸಿ.ವಿ. ಮುರಳಿ ಧರ, ಗ್ರೀನ್ ಪಾತ್ ನ ಸ್ಥಾಪಕರು ಶ್ರೀ ಜಯರಾಮ್, ಉಷಾ ಕಿಣಿ, ಪ್ರಮುಖ ಪರಿಸರವಾದಿ ಪ್ರಕೃತಿ ಪ್ರಸನ್ನ ಹಾಗೂ ಕಲಬುರಗಿ ಸೈಕಲಿಂಗ್ ಕ್ಲಬ್ನ ಕಿರಣ್ಕುಮಾರ್,ಪ್ರವೀಣ ಕುಲಕರ್ಣಿ, ಭಾಗ್ಯಲಕ್ಷ್ಮಿ, ನಮ್ಮ ಬೆಂಗಳೂರು ಸಂಸ್ಥೆಯ ಶ್ರೀ ವಿನೋದ್,ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀ ಜಗದೀಶ್
ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪ್ರಕೃತಿಯನ್ನು ರಕ್ಷಿಸಬೇಕಾದ ಅನಿವಾರ್ಯತೆಯನ್ನು ಸಾರಿದರು.
– ಕರುನಾಡ ಕಂದ ಸುದ್ದಿ




















