ಉಡುಪಿ: ಬೆಂಗಳೂರಿನ ನುಡಿತೋರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗ ಆಶ್ರಯದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದಲ್ಲಿ ನುಡಿಸಂಭ್ರಮ-2026 ನ್ನು ಆಚರಿಸಲಾಯಿತು.
ಹಿರಿಯ ಸಾಹಿತಿ ಪ್ರೇಮಾಶಂಕರ್, ನೀಲಕಂಠ ಅಡಿಗ, ಎ ಎಸ್ ಎನ್ ಹೆಬ್ಬಾರ್, ಶ್ರೀಕಾಂತ ಪತ್ರೆಮರ, ವೆಂಕಟೇಶ ಶೇಷಾದ್ರಿ, ರಾಸು ವೆಂಕಟೇಶ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂವರು ಹಿರಿಯ ಲೇಖಕಿಯರಾದ ಶ್ರೀಮತಿ ರಾಧಾ ಟೇಕಲ್, ಶ್ರೀಮತಿ ಶೈಲ ಜುಕುಮಾರ್ ಹಾಗೂ ಶ್ರೀಮತಿ ಶೋಭಾ ಹರಿಪ್ರಸಾದ್ ಅವರಿಗೆ “ನುಡಿತೋರಣ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಆರಂಭದಲ್ಲಿ ಪರಿಮಳ ಮಹೇಶ್ ಅವರು ಯಕ್ಷಗಾನದ ಮೂಲಕ ಸ್ವಾಗತವನ್ನು ಕೋರಿದರು. ಕಾರ್ಯಕ್ರಮದ ನಿರೂಪಣೆಯನ್ನು ಛಾಯಾ ಭಗವತಿ ನಿರ್ವಹಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















