ಉತ್ತರ ಕನ್ನಡ : ದಾಂಡೇಲಿ ನಗರಕ್ಕೆ ಬೇರೆ ಜಿಲ್ಲೆ ರಾಜ್ಯ ಪ್ರದೇಶಗಳಿಂದ ದಾಂಡೇಲಿ ಜಲಕ್ರೀಡೆ,ಸುಂದರ ಅರಣ್ಯ,ದಾಂಡೇಲಿ ಸುತ್ತ ಮುತ್ತು ಕಾಡು ಬೆಟ್ಟ ಗುಡ್ಡ ಹಾಗೂ ದಾಂಡೇಲಿ ನಗರವನ್ನು ವೀಕ್ಷಣೆ ಮಾಡುವುದಕ್ಕೆ ಬರುತ್ತಾರೆ. ನಮ್ಮ ಹೆಮ್ಮೆಯ ದಾಂಡೇಲಿಯ ಸೋಮಾನಿ ವೃತ್ತದಿಂದ ಮುಖ್ಯ ರಸ್ತೆಗಳ ಮೇಲೆ ಹಾಗೂ ಮಾರುಕಟ್ಟೆ ಮುಖ್ಯ ರಸ್ತೆಗಳ ಮೇಲೆ ಎಲ್ಲಿ ಬೇಕಾದರೂ ಅಲ್ಲಿ ಬೈಕ್, ಕಾರು, ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಅದು ಸಾರ್ವಜನಿಕರಿಗೆ ಹಾಗೂ ದಾಂಡೇಲಿ ನಗರಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಕೆ. ಎಸ್. ಆರ್. ಟಿ. ಸಿ ಬಸ್ ಸಂಚಾರಕ್ಕೆ ಅಪಘಾತಕ್ಕೆ ತುತ್ತಾಗುವ ದಾರಿಯಾಗುತ್ತಿದೆ. ಮುಖ್ಯ ರಸ್ತೆಗಳ ಮೇಲೆ ಪಾರ್ಕಿಂಗ್ ಮಾಡುವ ಬೈಕಗಳು ಕಾರಗಳು ಸೇರಿದಂತೆ ಇನ್ನಿತರ ವಾಹನಗಳು ರಸ್ತೆ ಸಂಚಾರಕ್ಕೆ ಅಡಚಣೆ ಹಾಗೂ ದಾಂಡೇಲಿ ನಗರಕ್ಕೆ ಬರುವ ಪ್ರವಾಸಿಗರಿಗೂ ಬಹಳ ಸಮಸ್ಯೆಗಳಿಗೆ ಗುರಿಯಾಗುತ್ತಿದೆ.
ಈ ಕೂಡಲೇ ದಾಂಡೇಲಿ ನಗರ ಪೊಲೀಸ್ ಠಾಣೆ ಹಾಗೂ ನಗರಸಭೆ ಹಾಗೂ ತಹಸೀಲ್ದಾರರು ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಕಿತ್ತೂರು ಕರ್ನಾಟಕ ಸೇನೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಸಾಧಿಕ್ ಮುಲ್ಲಾ ಮಾಧ್ಯಮ ಪ್ರಕಟಣೆ ಮೂಲಕ ಆಗ್ರಹ ಮಾಡಿದ್ದಾರೆ.
ವರದಿ ತೇಜಸ್ ರಾವ್, ದಾಂಡೇಲಿ




















