ನಂಜನಗೂಡು ಸರಕಾರಿ ಹಿರಿಯ ಪ್ರಾಥಮಿಕ ದ್ವಿಭಾಷಾ ಶಾಲೆಗೆ ಪ್ರಾರ್ಥನಾ ಸಮಯದಲ್ಲಿ ಗಸ್ತು ಪೊಲೀಸರ ಭೇಟಿ ಈ ವಾರ್ಡ್ನ ನ ಗಸ್ತು ಪೊಲೀಸ್ ಪೇದೆಯಾದ ಜೈಕುಮಾರ್ ಅವರು ಭೇಟಿ ನೀಡಿದ್ದು, ಪ್ರಾರ್ಥನಾ ಸಮಯದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳು ಮೊಬೈಲ್ ಬಳಸಬೇಡಿ, ಮಕ್ಕಳು ಶಾಲೆಗೆ ಪ್ರತಿನಿತ್ಯ ಕಡ್ಡಾಯವಾಗಿ ಬರಬೇಕು. ಶಾಲೆಗೆ ಬರುವಾಗ ಹೋಗುವಾಗ ಹಾಗೂ ಶಾಲೆಯ ಸಮಯದಲ್ಲಿ ತೊಂದರೆಯಾದರೆ ಮಕ್ಕಳ ಸಹಾಯವಾಣಿ ನಂಬರನ್ನು ಬಳಸಿ ಕರೆ ಮಾಡಬಹುದು ಎಂದರು. ನಾವು ಕೂಡ ಆಗಾಗ ಶಾಲೆಗೆ ಭೇಟಿ ನೀಡುತ್ತೇವೆ. ಯಾವುದೇ ರೀತಿಯ ತೊಂದರೆಗಳಾದರೆ ನಮಗೂ ಕೂಡ ತಿಳಿಸಬಹುದು, ಸಹಾಯವನ್ನು ಪಡೆಯಬಹುದೆಂದರು.
ಈ ಸಮಯದಲ್ಲಿ ಶಾಲಾ ದೈಹಿಕ ಶಿಕ್ಷಕರಾದ ನಾಗೇಶ್ ನಾಯಕ್, ಸತ್ಯನಾರಾಯಣ್, ಸುನಿಲ್ ಕುಮಾರ್ ಶಿಕ್ಷಕರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















