ಹಸಿರು ತೊಟ್ಟಿನ ಕೆಂಪು ಗರಿಯ
ದಾಸವಾಳಗಳು
ಎಂದಿಗೂ ಅರಳದೆ ಗಿಡದಲಿ
ತೂಗಾಡುವವಳು
ಎಲ್ಲ ಕಾಲದಲಿಯೂ ಎಲ್ಲೆಡೆಯಲಿ ರಾರಾಜಿಸುವವಳು
ದಾರದಲಿ ಪೋಣಿಸಲು ಚಂದದ ಹಾರವಾಗುವವಳು
ವೃತ್ತಾಕಾರದಲಿ ಜೋಡಿಸಿಹ ಇಂದಿನ ವಿನ್ಯಾಸದಲಿ
ಅರಳಿರುವ ಶ್ವೇತ ಸೇವಂತಿ ವಿರಮಿಸಿಹಳು ಅಂದದಲಿ
ಬೆಳ್ಳಿಯಾ ಪುಷ್ಪ ದಳಗಳ ಇರಿಸಲು ನಡು ನಡುವಲಿ
ಕೇಸರಿ ಹೆಲಿಕೋನಿಯ ಕಾಡುಬಾಳೆ ಹೂಗಳ ಜೊತೆಯಲಿ
ಉದಯಿಸಿರುವ ನವ್ಯ ವಿನ್ಯಾಸದ ಸುಲಲಿತ ಚಿತ್ತಾರವು
ಸರಳ ಪದ ಕುಂಜಗಳಲಿ ಮೂಡಿರುವ ಕಾವ್ಯೋದಯವು
ಓದುಗರ ಮನಮುಟ್ಟಿ ಹೃದಯವ ಗೆಲ್ಲಲು ನಿಂದಿಹವು
ಕ್ರಿಯಾಶೀಲ ಮನಗಳಿಗೆ ಹೇಳ ಬರುತಿವೆ ಶುಭ ಮುಂಜಾವು
- ಲಲಿತಾ ಕೆ ಆಚಾರ್, ಬೆಂಗಳೂರು.


















