ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೇಘಸಂದೇಶ

ಗಂಗೆಯುಟ್ಟ ಶುಭ್ರ ಶ್ವೇತವಸ್ತ್ರ ಎಲ್ಲೆಡೆ
ಬೆಳ್ಳಿ ಮೋಡವಾಗಿ
ಗಗನ ವಿಹಾರಿ ಗಂಗೆಯ ಕಾಲ್ಗೆಜ್ಜೆಯ
ಛನ್ ಛನ್ ನಿನಾದವಾಗಿ
ಧವಲಗಿರಿಗಳ ಮೇಲೆ ಕಪ್ಪುಕೇಶರಾಶಿ
ಕಾರ್ಮೋಡಗಳಾಗಿ
ಸೂರ್ಯನ ಕಣ್ಣಂಚಿನ ಕೋಲ್ಮಿಂಚಾಗಿ
ಮಳೆಗರೆವೆ ಭುವಿಗಾಗಿ||

ಬೆಳ್ಳಿ ಮೋಡವೇ ಬಾನಿನ ಬೆಳ್ಳಿಯ
ಕನಸು ನೀನು
ಭುವಿಯ ಬಾಯಾರಿಕೆಗೆ ಭರವಸೆಯ
ನನಸು ನೀನು
ಬಿಸಿಲ ಬೇಗೆಯಲ್ಲಿ ಬಳಲಿದ ಜೀವಿಗೆ
ತಂಪಿನ ತಾಯಿ ನೀನು
ಮೇಘಶ್ಯಾಮ ಮಾಲೆಯಾಗಿ ಭುವಿಗೆ
ವೃಷ್ಟಿಗರೆವೆ ನೀನು||

ಗಾಳಿಯ ಗೆಳೆಯನಾಗಿ ಗಗನದಲಿ
ತೇಲುತ್ತ ಓಡುವೆ
ಗಿರಿ ಶಿಖರ ಬೆಟ್ಟಗಳಿಗೆ ಗಂಧರ್ವಗೀತೆ
ಹಾಡುತ ಸ್ಪರ್ಶಿಸುವೆ
ಮಳೆಯ ಮುತ್ತುಗಳನ್ನು ಮಡಿಲೊಳಗೆ
ಹೊತ್ತು ಹಸಿರಿಗುಸಿರಾಗುವೆ
ಮಣ್ಣಿನ ಮಡದಿಗೆ ಮಂಗಳಸ್ನಾನದ
ಮಜ್ಜನಗೈಯ್ಯುವೆ||

ರೈತನ ಕಣ್ಣಲಿ ಹೊಸ ಕನಸು ಅರಳಿಸಿ
ಭವಿಷ್ಯದ ಬೆಳಕಾಗುವೆ
ಸಂಜೆಯ ಸಿಂಧೂರದ ಬಣ್ಣವನು
ಧರಿಸಿ ಮುಗುಳ್ನಗುವೆ
ವಸುಂಧರೆಗೆ ನಾನಾ ಬಣ್ಣಗಳನೆರಚಿ
ಸಂತೋಷಪಡುವೆ
ಸೂರ್ಯನೊಂದಿಗೆ ಕತ್ತಲಲಿ ಕರಗಿ
ಮರೆಯಾಗಿ ಹೋಗುವೆ||

ಓಡುವ ಕಾರ್ಮೋಡಗಳೆ ಆಷಾಢದ
ವಿರಹ ಗೀತೆ ಕೇಳುವಿರಾ
ದೂರದೂರಲಿರುವ ನನ್ನ ಇನಿಯನಿಗೆ
ಪ್ರೇಮದ ಓಲೆ ತಲುಪಿಸುವಿರಾ
ನರ್ತಿಸುವ ನವಿಲುಗಳೆ ಕೋಗಿಲೆಗಳೆ
ಮೇಘರಾಜನಿಗೆ ಹೇಳುವಿರಾ
ಸಂಪಿಗೆ ಮಲ್ಲಿಗೆ ಹೂವುಗಳೆ ನಿಮ್ಮ
ಪರಿಮಳ ವೃಷ್ಟಿ ಸುರಿಸುವಿರಾ||

  • ಅನ್ನಪೂರ್ಣ ಸು. ಸಕ್ರೋಜಿ, ಪುಣೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!