
ಕೊರಟಗೆರೆ ಪುರಸಭೆ ವ್ಯಾಪ್ತಿಯ 22ವಾರ್ಡ್ ಗ್ರಾಮವಾದ ಕಲ್ಲುಗುಟ್ಟರಹಳ್ಳಿ
ಹಬ್ಬದ ಸಂಭ್ರಮ.
ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ ಹಾಗೂ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ತಾಯಿಗೆ ಕುಂಕುಮಾರ್ಚನೆ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳಿ ವತಿಯಿಂದ ಏರ್ಪಡಿಸಲಾಗಿತ್ತು. ದೇವಾಲಯದ ಗೋಪುರ ಪೂಜಾ ಕಾರ್ಯಕ್ರಮಗಳು ನೆರವೇರಿಸಿ ಮಾತನಾಡಿದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯು ಧಾರ್ಮಿಕ ಕಾರ್ಯಗಳಿಂದ ಧರ್ಮ ಸತ್ಯ ನೈಜತಿಯು ಉಳಿದು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಧರ್ಮಸ್ಥಳ ಸಂಘ ಸಂಸ್ಥೆಗಳ ಯೋಜನೆಗಳು ಜೀವನಾಡಿಯಾಗಿವೆ. ದೇವಾಲಯಗಳು ಮನುಷ್ಯ ಮತ್ತು ಪರಮಾತ್ಮನ ನಡುವಿನ ಸಂಪರ್ಕ, ನಿತ್ಯದ ಒತ್ತಡದಿಂದ ಮನಸ್ಸಿಗೆ ಶಾಂತಿ ಸಿಗಲು ದೇವಾಲಯಗಳು ಸೂಕ್ತ ಸ್ಥಳ, ವಿಶೇಷ ಪೂಜೆಗಳು ಮತ್ತು ಉತ್ಸಾಹಗಳು ಜನರನ್ನು ಒಗ್ಗೂಡಿಸಿ ಸಂತಸವನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಿಂದ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಶಾಲೆಗಳ ಅಭಿವೃದ್ಧಿಗೆ ಧನ ಸಹಾಯ, ಶುದ್ಧ ಕುಡಿಯುವ ನೀರಿನ ಘಟಕಗಳು ಮುಂತಾದ ಯೋಜನೆಗಳು ಗ್ರಾಮೀಣ ಭಾಗದ ಜನರಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ನಮ್ಮ ಗ್ರಾಮದ ದೇವಾಲಯಕ್ಕೆ ನಾವು ಧರ್ಮಸ್ಥಳ ಸಂಘದಿಂದ ಸಹಾಯ ಪಡೆದಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಗ್ರಾಮದ ಕೇಬಲ್ ವಿಜಯಕುಮಾರ್ ಹೇಳಿದರು.
ಭಕ್ತರು ದೇವಸ್ಥಾನಕ್ಕೆಆಗಮಿಸುವ ಅಂಗವಾಗಿ ಭಕ್ತರಿಗೆ ಕುಡಿಯವ ನೀರು, ಅನ್ನ ದಾಸೋಹದ ವ್ಯವಸ್ಥೆಯನ್ನೂ ಮಾಡಿ. ತಾಯಿ ಕೃಪೆ ಅಕ್ಕಪಕ್ಕದ ಗ್ರಾಮಸ್ಥರ ಮತ್ತು ಸಮಸ್ತ ಭಕ್ತರ ಮೇಲಿರಲಿ .”
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ದೇವಾಲಯದ ಆಡಳಿತ ಮಂಡಳಿ ಸಮನ್ವಯದಿಂದ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಇದೆ ಸಂದರ್ಭದಲ್ಲಿ ಗ್ರಾಮದ ಯಜಮಾನರು ,ಪಣಗಾರರು ಗಂಕಾರರು, ಅರ್ಚಕರು, ತಳವಾರ ನಾಯಕರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಹಾಗೂ ಗ್ರಾಮದ ಮಾರಮ್ಮ ದೇವಿಯ ಸೇವಾ ಟ್ರಸ್ಟ್ ಸದಸ್ಯರು ಮತ್ತು ಶ್ರೀ ವಿನಾಯಕ ಬಳಗದ ಸದಸ್ಯರು ಹಾಗೂ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು ಭಾಗಿಯಾಗಿದ್ದರು. ಟ್ರಸ್ಟ್ ಆಡಳಿತ ಮಂಡಳಿ ಸೇರಿದಂತೆ ಇತರರು ಇದ್ದರು.
ವರದಿ .ಪ್ರಸನ್ನ ಕುಮಾರ್ .ಎಸ್. ಕೊರಟಗೆರೆ.




















