ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಿಣ್ಣರ ಸಂತೆ ಚಿಕ್ಕ ಮಕ್ಕಳ ಕೈಯಲ್ಲಿ ದೊಡ್ಡ ಜಗತ್ತು.

ಆಧುನಿಕ ಯುಗದ ವ್ಯವಹಾರ ಜ್ಞಾನ : ಪುಟಾಣಿ ಮಕ್ಕಳ ಕೈಯಲ್ಲಿ ದೊಡ್ಡ ಕಲಿಕೆ.

ಕೊರಟಗೆರೆ. ಶ್ರೀ ರಾಘವೇಂದ್ರ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿಣ್ಣರ ಸಂತೆ ಆಯೋಜನೆ ಮಾಡಿದ್ದು ಚಿನ್ನರ ಸಂತೆಯು ಪುಟಾಣಿಗಳ ಕೈಯಲ್ಲಿ ಪುಟ್ಟ ವ್ಯಾಪಾರವು ತುಂಬಾ ಅಚ್ಚುಕಟ್ಟಾಗಿ ಸಂತೆಯ ಮೈದಾನವನ್ನು ವ್ಯಾಪಾರದಿಂದ ಕಂಗೊಳಿಸಿತು.

ಶಾಲೆಯ ಮಕ್ಕಳು ಹಣ್ಣು, ತರಕಾರಿ ,ದಿನಸಿ ಸಾಮಾನುಗಳು, ಹೂವು, ಬಿದರಿನ ತಯಾರಿಕಾ ವಸ್ತುಗಳು, ಮರಗೆಣಸು, ಉಪ್ಪಿನಕಾಯಿ ಇನ್ನು ಅನೇಕ ಮಾರಾಟ ಮಾಡುವ ಮೂಲಕ ಮಕ್ಕಳಿಗೆ ವ್ಯವಹಾರ ಮತ್ತು ಹಣದ ಮೌಲ್ಯವನ್ನು ತಿಳಿಸಿಕೊಟ್ಟು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಾಲೆಯು ಹೊರ ಜಗತ್ತಿನ ಮಾಹಿತಿಯನ್ನು ತಿಳಿಸಲು ಇಂತಹ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಶಾಲೆಗಳಲ್ಲಿ ನಡೆಸುತ್ತಿದ್ದು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಮಕ್ಕಳಿಗೆ ಗಣಿತ ವ್ಯವಸಾಯ ಮತ್ತು ರೈತರೊಂದಿಗೆ ಜಗತ್ತಿಗೆ ಇರುವ ಸಂಬಂಧ ಅನುಬಂಧವನ್ನು ಸಂತೆಯ ಮಾದರಿಯಲ್ಲಿ ತಿಳಿಸಿ ಮಕ್ಕಳಿಗೆ ವ್ಯವಹಾರ ಜ್ಞಾನವನ್ನು ಬೆಳೆಸಲು ಚಿಣ್ಣರ ಸಂತೆ ಒಂದು ದೊಡ್ಡ ವೇದಿಕೆಯಾಗಿದೆ.

ಇಂದು ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿನಿಯರು ಹಾಗೂ ಶಾಲೆಯ ಮುಖ್ಯಸ್ಥರಾದ ಅಜಯ್ , ರುದ್ರೇಶ್, ವ್ಯವಸ್ಥಾಪಕರಾದ ರವಿಕುಮಾರ್ ಹಾಗೂ ಆಡಳಿತ ವರ್ಗದ ಎಲ್ಲಾ ಸಿಬ್ಬಂದಿಗಳು ಮಕ್ಕಳೊಂದಿಗೆ ವ್ಯವಹಾರ ,ವ್ಯಾಪಾರ ,ಸ್ನೇಹ ಸಂಬಂಧಗಳ ಮಾಹಿತಿಯನ್ನು ತಿಳಿಸಿದರು.

ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!