ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಿರೂರ ಗ್ರಾಮದ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮದಲ್ಲಿ ಶ್ರೀ ಭೋಗೇಶ್ವರ ದೇವರ ಜಾತ್ರಾ ಮಹೋತ್ಸವವನ್ನು ನೂತನ ರಥ ಎಳೆಯುವದರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು ಕಳಸಾರೋಹಣ ರುದ್ರಾಭಿಷೇಕ ಮತ್ತು ಹೂವಿನ ಅಲಂಕಾರೋಹಣ ಹಾಗೂ ದಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.ಪ್ರತಿ ವರ್ಷದಂತೆ ಈ ವರ್ಷವೂ ದಿ-10-9-2023 ರವಿವಾರದಿಂದ ದಿ 11- 9-2023 ಸೋಮವಾರದವರೆಗೆ ಶ್ರೀ ಭೋಗೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು.
ದಿವ್ಯ ಸಾನಿಧ್ಯ ಶತಾಯುಷಿ ಶ್ರೀ ಷ.ಬ್ರ.‌.ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೂರ
ಅಧ್ಯಕ್ಷತೆ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೂರ ಇವರುಗಳು ವಹಿಸಿದ್ದರು.
ದಿನಾಂಕ 10.9.2023 ರವಿವಾರದಂದು ರಾತ್ರಿ 9.30ಕ್ಕೆ ಶ್ರೀ ಭೋಗೇಶ್ವರ ಭಜನಾ ಸಂಘ ಹಿರೂರ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ ಸಿಂದಗಿ ಇವರಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.ದಿ-11.9.2023 ಸೋಮವಾರದಂದು ಮುಂಜಾನೆ 8 00.ಘಂಟೆಗೆ ಹುಲುಬಾವಿಯಿಂದ ಶ್ರೀ ಭೋಗೇಶ್ವರ ದೇವಸ್ಥಾನದವರೆಗೆ ಗಂಗಾ ಸ್ಥಳದಿಂದ
ಊರಿನ ಪ್ರಮುಖ ಬೀದಿಗಳಲ್ಲಿ ಕುಂಭ,ಕಳಸ ವಾದ್ಯ ವೈಭವದೊಂದಿಗೆ ನಡೆಸಲಾಯಿತು.
11 ಘಂಟೆಗೆ ಶ್ರೀಭೋಗೇಶ್ವರ ದೇವಸ್ಥಾನದಿಂದ ಡೋಣಿ ಭೋಗೇಶ್ವರದವರೆಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ನಂತರ ಆರ್ಚಕರಾದ ಶ್ರೀ ಜಗನ್ನಾಥ ಅನಂತರಾವ, ಜೋಶಿ ಹಾಗೂ ಶ್ರೀ ವೆಂಕಟೇಶ್,ಗುಂಡಾಚಾರ್ಯ, ಜೋಶಿ ಇವರಿಂದ ಭೋಗೇಶ್ವರ ಕರ್ತೃ ಗದ್ದುಗೆಗೆ ಪೂಜೆ ನಡೆಯಿತು.
ಸಮಸ್ತ ಗ್ರಾಮಸ್ಥರು ಹಾಗೂ ಊರಿನ ಎಲ್ಲಾ ಗುರುಹಿಯರು ಮಹಿಳೆಯರು ಯುವಕರು ಹಾಗೂ ಹಿರೂರ,ಚೋಕಾವಿ,ತಮದಡ್ಡಿ,ಬಳಗಾನೂರ ಹಾಗೂ ಸುತ್ತ ಮುತ್ತಲಿನ ಗ್ರಾಮದವರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ