ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಾಕ್ ಮತ್ತು ಶ್ರವಣನ್ಯೂನ್ಯತೆ ಮಕ್ಕಳ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ

ಬಾಗಲಕೋಟೆ/ ಹುನಗುoದ: ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವ್ಹಲಪ್‌ಮೆಂಟ್ ಸೊಸಾಯಟಿ (ಬರ್ಡ್ಸ) ಹುನಗುಂದ ಹಾಗೂ ಎಕ್ಸಿಲೋ ಫಿನ್‌ಸರ್ವ ಪ್ರೈವೇಟ್ ಲಿಮಿಟೆಡ್ ಬಾಂಬೆ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ, ಹುನಗುಂದ ಹಾಗೂ ಇಲಕಲ್ ತಾಲೂಕಿನ ವಾಕ್ , ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ನಾಲ್ಕು ದಿನಗಳ ಕಾಲ ನಡೆದ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬಾಗಲಕೋಟೆಯ ಅಧಿಕಾರಿಗಳಾದ ಸವಿತಾ ಕಾಳೆಯವರು ಮಕ್ಕಳಿಗೆ ಸರ್ಟಿಫಿಕೇಟ್ ಹಾಗೂ ಕಲಿಕಾ ಕಿಟ್ ವಿತರಿಸಿ ಮಾತನಾಡಿ ಇಂತಹ ಮಕ್ಕಳು ಒಂಭತ್ತನೇ ವರ್ಗದವರೆಗೆ ಶಾಲೆಗೆ ಬರುತ್ತಾರೆ ಆದರೆ 10 ನೇ ವರ್ಗಕ್ಕೆ ಬಂದಾಗ ಶಾಲೆ ಬಿಡುವ ಹಾಗೂ ಪಾಸಾಗುವವರ ಸಂಖ್ಯೆ ಕಡಿಮೆ ಆಗುತ್ತದೆ. ಇದನ್ನು ತಡೆಗಟ್ಟಲು ಸಂಘ, ಸಂಸ್ಥೆಗಳು ಹಾಗೂ ಇಲಾಖೆಗಳು ಜಂಟಿಯಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ ಹಾಗೂ ಇಂತಹ ಮಕ್ಕಳಿಗೆ ವಿಶೇಷ ವ್ಯವಸ್ಥೆಗಳಾದ ಸಂಜ್ಞಾ ಭಾಷೆ, ಸ್ಪೀಚ ಥೆರಪಿ, ಲಿಪ್ ಲ್ಯಾಂಗ್ವೇಜ್ ನಡೆಯಬೇಕು. ಬರ್ಡ್ಸ ಸಂಸ್ಥೆಯು ವಿಕಲಚೇತನರ ಹಾಗೂ ಆರೈಕೆದಾರರ ಜತೆ ಬಾಗಲಕೋಟಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಕ್ಕಾಗಿ 2024 ರಲ್ಲಿ ರಾಜ್ಯ ಪ್ರಶಸ್ತಿ ಸಿಕ್ಕಿದೆ ಮುಂದುವರೆದು ಇನ್ನೂ ಹೆಚ್ಚಾಗಿ ಕೆಲಸ ನಿರ್ವಹಿಸಬೇಕು ಅದಕ್ಕಾಗಿ ನಮ್ಮ ಇಲಾಖೆಯ ಸಹಾಯ ಸಹಕಾರ ಇದೆ ಎಂದರು. ಕಿಟ್ ನಲ್ಲಿ ಶಿಕ್ಷಣ ಹೊಂದುವ ಕಲಿಕಾ ಸಾಮಾಗ್ರಿಗಳಿವೆ ಅವುಗಳನ್ನು ಉಪಯೋಗಿಸಲು ಪಾಲಕರಿಗೆ ತಿಳಿಸಿದರು. ಬಿಆರ್‌ಸಿಯ ಬಿಐಇಆರ್‌ಟಿ ಗಳಾದ ಸುರೇಶ ಸುಳಿಭಾವಿ ಮಾತನಾಡುತ್ತಾ ಅವಳಿ ತಾಲೂಕಿನಲ್ಲಿ ವಿಕಲಚೇತನ ವಿದ್ಯಾರ್ಥಿಗಳನ್ನು ಸರಕಾರ ನೇರವಾಗಿ ತಲುಪಿಸುತ್ತಿದೆ ಅದರಲ್ಲೂ ಶಿಕ್ಷಣ ಇಲಾಖೆಯು ಉತ್ತಮವಾಗಿ ಮಾಹಿತಿ ಹಾಗೂ ತರಬೇತಿ ನೀಡುತ್ತಿದೆ. ಸರಕಾರದಿಂದ ಬರುವ ಸೌಲಭ್ಯಗಳಿಂದ ಯಾರೂ ವಂಚಿತರಾಗಬಾರದು ಎಂದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಸ್ಥಾಪಕ ಮಹಾಂತೇಶ ಅಗಸಿಮುಂದಿನ ಮಾತನಾಡಿ ಕಳೇದ ನಾಲ್ಕು ದಿನಗಳಿಂದ ಬಿಡಿ ತಟ್ಟಿ ಲಕ್ಷೇಶ್ವರ ಹಾಗೂ ಬರ್ಡ್ಸ ತುಕಾನಟ್ಟಿ ಶಾಲೆಯ ಶಿಕ್ಷಕರು ಉತ್ತಮವಾಗಿ ತರಬೇತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಗಲಕೋಟೆಯಲ್ಲಿ ವಿಶೇಷ ಶಾಲೆ ಆರಂಬಿಸುವ ಯೋಜನೆ ಇದೆ ಪ್ರತಿ ವರ್ಷ ಬೇಸಿಗೆ ಹಾಗೂ ದಸರಾ ಶಿಬಿರಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದೇವೆ. ಇದು 14ನೇಯ ಶಿಬಿರ ಬಾಗಲಕೋಟೆ, ಇಳಕಲ್, ಹುನಗುಮದ ತಾಲೂಕ ಸೇರಿ ಒಟ್ಟು 48 ಮಕ್ಕಳು ಭಾಗವಹಿಸಿದ್ದಾರೆ. ಇಂತಹ ಮಕ್ಕಳಿಗೆ ಸ್ವ ಸಾಮರ್ಥ್ಯ ಇದೆ. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಯಲ್ಲಿ 100 ಕ್ಕೆ 100 ರಷ್ಟು ಪಾಸಾಗಿದ್ದಾರೆ ಇದೇ ರೀತಿ ಸಹಾಯ ಸಹಕಾರ ಇಲಾಖೆ, ಜನಪ್ರತಿನಿಧಿಗಳು, ಸಾಮಾಜಿಕ ಕ್ಲಬ್‌ಗಳ ಸಹಾಯ ಸಹಕಾರ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಬರ್ಡ್ಸ ಚೇರ‍್ಮನ್ನ ಪ್ರೋ.ಸಿ.ಜಿ.ಹವಾಲ್ದಾರ್ ಮಾತನಾಡುತ್ತಾ ಸಂಸ್ಥೆಯು ವಿಶೇಷ ಚೇತನ ಮಕ್ಕಳು ಹಾಗೂ ಆರೈಕೆದಾರರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಸಿಎಸ್‌ಆರ್ ಆರ್ಥಿಕ ಸಹಾಯದಿಂದ ಹಾಗೂ ದಾನಿಗಳ ನೆರವಿನಿಂದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುತ್ತಿದೆ. ಇದಕ್ಕೆ ಕ್ಷೇತ್ರಮಟ್ಟದ ಸಿಬ್ಬಂಧಿಗಳ ಪರಿಶ್ರಮ ಉನ್ನತವಾಗಿದೆ. ವಿಶೇಷ ಶಾಲೆ ತೆಗೆಯಲು ಎಲ್ಲಾ ಸೌಲಭ್ಯಗಳನ್ನು ಹೊಂದಿದ ಸ್ವಂತ ಕಟ್ಟಡ ಇದೆ. ಮುಂದಿನ ದಿನಮಾನಗಳಲ್ಲಿ ಅನುಷ್ಠಾನ ಮಾಡುತ್ತೇವೆಂದರು. ಅಜೀವ ಸದಸ್ಯರಾದ ವಿರೇಶ ಕುರ್ತಕೋಟಿ ಉಪಸ್ಥಿತರಿದ್ದರು. ಸ್ವಾಗತವನ್ನು ನಾಗರತ್ನ ಮಾಡಿದರು ವಂದನಾರ್ಪಣೆಯನ್ನು ಕಾವ್ಯಾ ಅಗಸಿಮುಂದಿನ ಮಾಡಿದರೆ ಕಾರ್ಯಕ್ರಮ ನಿರ್ವಹಣೆ ಪ್ರವೀಣಕುಮಾರ ಮಾಡಿದರು. 48 ಮಕ್ಕಳಿಗೆ ಕಲಿಕಾ ಕಿಟ್ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ