ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ಎಜುಕೇಶನ್ ಟ್ರಸ್ಟ್ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಶಾಲೆಯ ಮಕ್ಕಳಿಗೆ ರಾಷ್ಟ್ರಧ್ವಜ ಚಿತ್ರಕಲೆ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ವೇಳೆ ಟ್ರಸ್ಟ್ ನ ಅಧ್ಯಕ್ಷ ಎಸ್. ರಾಮಪ್ಪ ಮಾತನಾಡಿ ರಾಷ್ಟ್ರಧ್ವಜ ನಮ್ಮ ದೇಶದ ಸಂಕೇತವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯು ಗೌರವಿಸುವ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಗೆ ಅದರ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು.
ಬಾಲಕರ ವಿಭಾಗದಲ್ಲಿ ಪ್ರಥಮ ಎಂ. ಕೌಶಿಕ್ ಜೀವನ್ ಸಾಯಿ, ದ್ವಿತೀಯ ಇರ್ಷದ್ ಎಸ್ ವಿ. ಎಂ. ತೃತೀಯ ಎಂ. ಫಯಾಜ್, ವೆಂಕಯ್ಯ ಮೆಮೋರಿಯಲ್ ಶಾಲೆ ಬಾಲಕಿಯರ ವಿಭಾಗದಲ್ಲಿ ಪ್ರಥಮ ಬುಶ್ರ ಮಹಮ್ಮದಿ, ದ್ವಿತೀಯ ಜಾಹ್ನವಿ, ಕೆಪಿಎಸ್ ಶಾಲೆಯ ತೃತೀಯ ಎಸ್ ತನುಶ್ರೀ ಜೀವನ್ ಶಾಹಿ ಶಾಲೆ ಸ್ಥಾನಗಳನ್ನು ಪಡೆದರು
ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















