‘ಶಾಲಾ ನಿವೇಶನ ಹದ್ದುಬಸ್ತು ಮಾಡಿಸಿ’
ಗುರುಮಠಕಲ್: ನ.10 ತಾಲ್ಲೂಕಿನ ಕಾಳಬೆಳಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ ನಿವೇಶನವನ್ನು ಹದ್ದುಬಸ್ತ ಮಾಡಿಕೊಡುವಂತೆ ಇಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರಿಗೆ ಮನವಿ ಪತ್ರ ನೀಡಿದರು.
ಸರ್ಕಾರದಿಂದ ಕಾಳಬೆಳಗುಂದಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ವೇ ನಂಬರ್ 488 ರಲ್ಲಿ ಒಂದು ಎಕರೆ ಜಮೀನು ಮಂಜೂರು ಮಾಡಿದ್ದು, ಕೂಡಲೇ ಹದ್ದುಬಸ್ತು ಮಾಡಿ ಸ್ಥಳ ಶಾಲೆಗೆ ಹಸ್ತಾಂತರ ಮಾಡಿ ತ್ವರಿತ ಗತಿಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಮುಂದಾಗಲು ನಾಗೇಶ್ ಗದ್ದಗಿ ಮನವಿ ಮಾಡಿದರು.
ಮನವಿ ನೀಡಲು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳಾದ ಗೋಪಾಲ ಕೃಷ್ಣ ಮೇಧಾ, ನರಸಿಮುಲು ಗಂಗನೊಳ, ಕಾಶಪ್ಪ ದೊರೆ, ರಾಮುಲು ಕೊಡಗಂಟಿ, ಮರೆಪ್ಪ ನಾಯಕ ಸೇರಿದಂತೆ
ಕಾಳಬೆಳಗುಂದಿ ಗ್ರಾಮದ ಸಾರ್ವಜನಿಕರು ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















