ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಂದ ಸಾರ್ವಜನಿಕರ ಅವಹಾಲು ಸ್ವೀಕಾರ

ಹನೂರು : ಪಟ್ಟಣದಲ್ಲಿರುವ ಲೋಕೋಪಯೋಗಿ ವಸತಿ ಗೃಹದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಸಾರ್ವಜನಿಕರಿಂದ ಅವಹಾಲು ಸ್ವೀಕರಿಸಿ ಜನರ ಸಮಸ್ಯೆ ಆಲಿಸಿದರು.

ಬಳಿಕ ಜಿಲ್ಲಾಧಿಕಾರಿ ರಮೇಶ್ ಅವರು ಮಾತನಾಡಿ, ಹನೂರು ನೂತನ ತಾಲೂಕು ಆಗಿದೆ ಕೆಲವು ದಾಖಲೆಗಳು ಇಲ್ಲಿ ಸರಿಯಾದ ಸಮಯಕ್ಕೆ ಸಿಗದ ಹಿನ್ನಲೆಯಲ್ಲಿ ಕೆಲಸ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.ದರಖಾಸ್ತು,ಪೋಡಿ ಹಾಗೂ ಇನ್ನಿತರ ಕೆಲಸ ಕಾರ್ಯಕ್ಕೆ ಅಗತ್ಯ ಕ್ರಮಕೊಳ್ಳಲು ಕ್ರಮವಹಿಸಲಾಗುತ್ತಿದೆ ಜನರು ಹಲವಾರು ಸಮಸ್ಯೆಗಳನ್ನು ಮನವಿ ಮೂಲಕ ಸಲ್ಲಿಸಿದ್ದಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ತಿಳಿಸಲಾಗಿದೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಹನೂರು ಪಟ್ಟಣ ಪಂಚಾಯಿತಿ ವತಿಯಿಂದ ಕಾಮಗಾರಿಗಳಿಗೆ ಅಕ್ರಮ ಬಿಲ್ ಪಾವತಿ ಮಾಡಬಾರದು, ಬಾಡಿಗೆದಾರರಿಗೆ ಸಲ್ಲಬೇಕಿದ್ದ ಹಣ ಪಾವತಿ ಮಾಡಬೇಕು,ಬಾಡಿಗೆ ಹಣ ನೀಡದಿದ್ದರೆ ಅಂಗಡಿ ಸೀಜ್ ಮಾಡಿ ಕಚೇರಿಯಲ್ಲಿ ಕಡತವಿಲ್ಲ ಎಂದರೆ ಕೇಸ್ ದಾಖಲು ಮಾಡಬೇಕು,ನಾಗಣ್ಣನಗರ ಶೀಘ್ರದಲ್ಲೇ ಕಂದಾಯ ಗ್ರಾಮ ಆಗಲಿದೆ ಎಂದು ತಿಳಿಸಿದರು.

ರೈತರಿಗೆ ಸಕಾಲದಲ್ಲಿ ಆರ್.ಟಿ.ಸಿ ಆಗಿಲ್ಲ,ಪ್ರಕೃತಿ ವಿಕೋಪದಡಿ ಹಣ ಕೈಸೇರಿಲ್ಲ,ಶೌಚಗೃಹಗಳಿಗೆ ಹಣ ಬಿಡುಗಡೆಯಾಗಿಲ್ಲ ಮಹದೇಶ್ವರ ಕ್ರೀಢಾಂಗಣಕ್ಕೆ ಒಳಹೋಗುವ ರಸ್ತೆಯಲ್ಲಿ ಜಲ್ಲಿಕಲ್ಲು ಎದ್ದಿದೆ.ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು, ಬಸ್, ಖಾತೆ, ಪಿಂಚಣಿ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು ಅಲ್ಲದೆ ಸಾರ್ವಜನಿಕರು ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ತಹಶಿಲ್ದಾರ ಆನಂದಯ್ಯ, ಎಡಿಎಲ್‌ಆರ್ ಚೇತನ್, ಸರ್ವೇಯರ್ ಕುಮಾರಸ್ವಾಮಿ, ಶಿರಸ್ತೇದಾರ ನಾಗೇಂದ್ರ, ಉಮಾ, ಪ್ರಭಾರ ತಹಸೀಲ್ಧಾರ್ ಮಂಜುನಾಥ್, ರಂಜಿತ್, ಇಂಜಿನಿಯರ್ ಜಗದೀಶ್, ಮುಖ್ಯಾಧಿಕಾರಿ ಮೂರ್ತಿ, ಆರ್.ಐ ಮಹದೇವಸ್ವಾಮಿ, ಬಸವರಾಜು, ವಿಎ ಶೇಷಣ್ಣ, ಮತ್ತಿತರರು ಇದ್ದರು.

ವರದಿ :ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ