ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗುರುವೆಂದರೆ…

ಗುರುವೆಂದರೆ,
ಅಕ್ಷರ ಜ್ಞಾನ ಕೊಡುವವರು
ಅಕ್ಕರೆಯ ಪ್ರೀತಿ ತೋರುವವರು
ಸಕ್ಕರೆಯ ಸಹ ಬಾಳ್ವಿಗೆ ಸಂದೇಶ ನೀಡಿವವರು….!

ಗುರುವೆಂದರೆ,
ಬದುಕು ಕೊಟ್ಟವರು,
ಬದುಕಲು ದಾರಿ ತೋರಿವವರು
ಬದುಕಿನುದ್ದಕ್ಕೂ ಬೆನ್ನೆಲುಬಾಗಿರುವವರು….!

ಗುರುವೆಂದರೆ,
ಪ್ರತಿ ಹೆಜ್ಜೆಗೆ ಕಾಯುವವರು
ಪ್ರೀತಿ ಮಮತೆಯಲಿ ಬೆರೆಯುವವರು
ಭೂತ ಪ್ರೇತಗಳ ನಂಬಿಕೆ ಅಳಿಸುವವರು….!

ಗುರುವೆಂದರೆ,
ಜಾತಿ ಧರ್ಮಗಳನು ಎತ್ತಿ ಹಿಡಿಯದವರು
ಕೋಮುಗಲಭೆಗಳ ಬೀಜ ಬಿತ್ತದವರು
ಸರ್ವ ಜನಾಂಗದಲಿ ಶಾಂತಿ ಸೃಷ್ಟಿಸುವವರು….!

ಗುರುವೆಂದರೆ,
ಸ್ತ್ರೀ ಸಮಾನತೆಗೆ ಒತ್ತುಕೊಡುವವರು
ನೈಜ ಇತಿಹಾಸವನ್ನು ಬೋಧಿಸುವವರು
ತಾರತಮ್ಯ ಮಾಡದೆ ಸಮಾನ ಭಾವದಿ ಕಾಣುವವರು….!

ಗುರುವೆಂದರೆ,
ದ್ವೇಷ ಅಸೂಯೆಗಳಿಂದ ದೂರಿರುವವರು
ರೋಷ ಆಕ್ರೋಶಗಳನು ತೊರೆಯುವವರು
ದೇಶ ಭಾಷೆಗಳನು ಪ್ರೀತಿಸಿ ಮುನ್ನಡೆಯುವವರು….!!

  • ಹನುಮಂತ ದಾಸರ
    ಭಾರತ ಸೇವಾರತ್ನ ಪ್ರಶಸ್ತಿ ಪುರಸ್ಕೃತರು
    ಮೊ: 9945246234.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ