ನಾವೆಲ್ಲರೂ ಸೇರಿ ತೇರಿಗೆ ಬರಬೇಕು
ಒಂಬತ್ತು ದಿವಸದ ಮುಂಚೆ ಸಿರಿಧಾನ್ಯ ಸೇರಿಸಬೇಕು
ಎಂಟು ದಿವಸದ ಮುಂಚೆ ಬೀಗರನ್ನು ಕರೆಸಬೇಕು
ಏಳು ದಿವಸದ ಮುಂಚೆ ಎಳ್ಳು ಹೋಳಿಗೆ ಮಾಡಬೇಕು
ಆರು ದಿವಸದ ಮುಂಚೆ ಹಚ್ಚು ಎಳ್ಳಿನ ರೊಟ್ಟಿ ಮಾಡಬೇಕು ಐದು ದಿವಸದ ಮುಂಚೆ
ಮುಳುಗಾಯಿ ಪಲ್ಯ ಮಾಡಬೇಕು
ನಾಲ್ಕು ದಿವಸದ ಮುಂಚೆ ನಾರಿಯರು ಸೇರಬೇಕು
ಮೂರು ದಿವಸ ಮುಂಚೆ ನಾಡಿಗೆಲ್ಲ ನಾವು ಹೇಳಬೇಕು
ಎರಡು ದಿವಸದ ಮುಂಚೆ ಎಲ್ಲಾ ಜನ ಸೇರಬೇಕು
ಒಂದು ದಿವಸದ ಮುಂಚೆ ಗವಿಸಿದ್ದಪ್ಪನ ಮಠದ ಮುಂದೆ ಇರಬೇಕು
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಎಲ್ಲರೂ ಬರಬೇಕು
ಕೊಪ್ಪಳ ಗವಿಸಿದ್ದೇಶ್ವರ ತೇರು ನೋಡಬೇಕು
ಐದು ಕಳಸದ ತೇರು ಎಲ್ಲರೂ ನೋಡಬೇಕು
ಎಲ್ಲರೂ ಹೂ ಬಾಳೆಹಣ್ಣು ತರಬೇಕು
ಎಲ್ಲರೂ ಕಾಯಿ ಕರ್ಪೂರ ಮಾಡಿಸಬೇಕು
ಜೀವನದಲ್ಲಿ ಕೊಪ್ಪಳ ತೇರು ನೋಡಬೇಕು
- ಅಕ್ಕಮಹಾದೇವಿ ರಾಜೂರು




















