ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಾವಗಡ ತಾಲ್ಲೂಕಿನ್ಯಾದಂತ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಿ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ್ಯಾದಂತ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಬೇಕೆಂದು ಇಂದು ಪಾವಗಡ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯನ್ನು ಉದ್ದೇಶಿಸಿ ಎನ್.ಎ.ಈರಣ್ಣನವರು ಮಾತನಾಡುತ್ತಾ ನಮ್ಮ ಮಾಜಿ ಶಾಸಕರಾದ ತಿಮ್ಮರಾಯಪ್ಪರ ಅವಧಿಯಲ್ಲಿ ತಾಲ್ಲೂಕಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ ಅಧಿವೇಶನ ಮಾತನಾಡಿ ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆ ಮಾಡಿಸಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಕೊಡಿಸಿದರೆಂದರು,ತಾಲ್ಲೂಕು ಅಧ್ಯಕ್ಷರಾದ ಬಲರಾಮರೆಡ್ಡಿನವರು ಮಾತನಾಡುತ್ತಾ ನಮ್ಮ ಮಾಜಿ ಶಾಸಕರ ಅವಧಿಯಾದ ನೀರಿನ ಘಟಕಗಳು ಹಾಲಿ ಶಾಸಕರ ಅವಧಿಯಲ್ಲಿ ದುರಸ್ತಿ ಪಡಿಸಲಾಗದೆ ಕೆಟ್ಟು ನಿಂತಿವೆ ಎಂದರು ಹಾಲಿ ಶಾಸಕರು ಜನರಿಗೆ ಕನಿಷ್ಠ ಕುಡಿಯುವ ನೀರನ್ನು ಕೊಡಲಾಗದೆ ನಿಸ್ಸೀಮರಾಗಿದ್ದಾರೆಂದರು,ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಲರಾಮರೆಡ್ಡಿ, ಎನ್.ಎ. ಈರಣ್ಣ, ರಾಜಶೇಖರಪ್ಪ, ಅಕ್ಕಲಪ್ಪನಾಯ್ಡು, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯೂನಸ್, ನಗರ ಘಟಕದ ಅಧ್ಯಕ್ಷರಾದ ಗಡ್ಡಂ ತಿಮ್ಮ, ನಲ್ಲಪ್ಪ, ಲಕ್ಷ್ಮೀ ನರಸಪ್ಪ, ಕಾವಗೇರಿ ರಾಮಾಂಜಿ, ವಸಂತ, ಮನು, ಜಿ.ಎ.ವೆಂಕಟೇಶ್, ಗಂಗಾಧರ ನಾಯ್ಡು, ಲೆಪ್ಟ್ ನಾಗರಾಜು, ತೆಂಗಿನಕಾಯಿ ವೆಂಕಟೇಶ್, ನಾರಾಯಣಪ್ಪ, ಧರ್ಮಪಾಲ್, ಸುಬ್ಬರಾಯಪ್ಪ, ಕೊಡಮಗುಡು ಕೃಷ್ಣಪ್ಪ, ಜಯರಾಮಪ್ಪ, ಅಂಜನ್ ಕುಮಾರ್, ಶಿವಕುಮಾರ್, ರಾಮಕೃಷ್ಣ ರೆಡ್ಡಿ, ಬಸವರಾಜು, ಈರಪ್ಪ, ಕೃಷ್ಣಮೂರ್ತಿ, ಲೋಕೇಶ್, ಮಂಜುನಾಥ ಹಾಗೂ ಇನ್ನೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ