ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾ ಶಿವರಾತ್ರಿ ಪ್ರಯುಕ್ತ 5 ರಿಂದ 18 ವರ್ಷದ ಮಕ್ಕಳಿಗಾಗಿ ಪ್ರಜ್ಞಾ ಯೋಗ ಶಿಬಿರ ಪ್ರಾರಂಭ

ಯಾದಗಿರಿ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆಯ ವತಿಯಿಂದ ಶಿವರಾತ್ರಿ ಪ್ರಯುಕ್ತ 5 ರಿಂದ 18 ವರ್ಷದ ಮಕ್ಕಳಿಗಾಗಿ ಪ್ರಜ್ಞಾ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಮತ್ತು ಯಾದಗಿರಿ ತಾಲೂಕಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗ ಹಾಗೂ ಆರೋಗ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಸಂಯೋಜಕರು ಹೇಳಿದರು ಈ ಕಾರ್ಯಕ್ರಮವನ್ನು ಫೆಬ್ರವರಿ ದಿನಾಂಕ 18 ಮತ್ತು 19 ರಂದು ಶಹಾಪುರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಯೋಗ ಶಿಬಿರ ಸ್ಥಳ ದರ್ಶನಾಪುರ್ ಕಾಲೇಜ್ ಬಾಪುಗೌಡ ನಗರದಲ್ಲಿ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ವಿಶೇಷ ಪ್ರಜ್ಞೆಯ ಮೂಲಕ ಕಣ್ಣು ಮುಚ್ಚಿ ಬರೆಯುವುದು ಮತ್ತು ಓದುವುದು ಬಣ್ಣಗಳನ್ನು ಗುರುತಿಸುವುದು. ಮುಂತಾದ ವಿಷಯಗಳನ್ನು ಕಲಿಯುತ್ತಾರೆ ಎಂದು ಹೇಳಿದರು.
ಶಿಬಿರದ ಪ್ರಯೋಜನಗಳು:
ಹೆಚ್ಚು ಜ್ಞಾಪಕ ಶಕ್ತಿ ಹೆಚ್ಚಿನ ಅರಿವು ಮತ್ತು ದೂರ ದೃಷ್ಟಿ ಅಂತರ್ ಪ್ರಜ್ಞೆ ಹಾಗೂ ಆತ್ಮವಿಶ್ವಾಸ ಸೃಜನಶೀಲತೆ ಮತ್ತು ಬುದ್ಧಿವಂತಿಕೆ
ಇತ್ಯಾದಿ
ಈ ಒಂದು ಕಾರ್ಯಕ್ರಮಕ್ಕೆ ಬಂದು ಈ ಸದುಪಯೋಗವನ್ನು ತಮ್ಮ ಮಕ್ಕಳಿಗೆ ಕೊಡಬೇಕಾಗಿ ಪೋಷಕರಲ್ಲಿ ವಿನಂತಿ ಎಂದು ಜಿಲ್ಲಾ ಅಭಿವೃದ್ಧಿ ಸಮಿತಿಯ ಭೀಮರಾಯ ಮಾಲಿ ಪಾಟೀಲ್ ಮತ್ತು ವಿದ್ಯಾಧರ್ ಆನೆಗುಂದಿ ಹಾಗೂ ಯಾದಗಿರಿ ಜಿಲ್ಲೆಯ ಸಂಯೋಜಕರಾದ ಎಸ್.ಎಚ್.ರಡ್ಡಿ ಯವರು ಪ್ರಜ್ಞಾ ಯೋಗ ಶಿಬಿರದ ಸಂಪೂರ್ಣ ಮಾಹಿತಿ ನೀಡಿದರು.

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

2 Responses

Leave a Reply

Your email address will not be published. Required fields are marked *

ಇದನ್ನೂ ಓದಿ