ಕೊಪ್ಪಳ : ಸಾಮಾಜಿಕ ಮಾಧ್ಯಮಗಳು ಸಮಾಜದಲ್ಲಿ ಅರಿವು ಮೂಡಿಸುತ್ತಿವೆ ಎಂದು ಮಹೇಶ ಕುಮಾರು ಛಲವಾದಿ ಹೇಳಿದರು.
ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಗುರುವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ -2025-26 ಸಾಲಿನ ವಾರ್ಷಿಕ ವಿಶೇಷ ಎರಡನೇ ದಿನದ ಶಿಬಿರದಲ್ಲಿ ಯುವ ಜನಾಂಗದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು
ಪ್ರತಿಭೆ ಪ್ರದರ್ಶನಕ್ಕೆ ಸಾಮಾಜಿಕ ಮಾಧ್ಯಮಗಳು ಉತ್ತಮ ವೇದಿಕೆ.
ತಮ್ಮ ಅಭಿಪ್ರಾಯಗಳನ್ನು ಮತ್ತು ಸಂದೇಶಗಳನ್ನು ಸಮಾಜಕ್ಕೆ ತಲುಪಿಸಲು ಇಂದು ಜನರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚು ಬಳಸುವುದರಿಂದ ಜನರ ಅರೋಗ್ಯ, ಶಿಕ್ಷಣ ಮೇಲೆ ಪರಿಣಾಮ ಬೀರಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಸಾಮಜಿಕ ಮಾಧ್ಯಮಗಳಿಂದ ಅನುಕೂಲ ಇದೆ, ಹಾಗೆಯೇ ಅನಾನುಕೂಲ ಕೂಡ ಇದೆ. ಸಾಮಾಜಿಕ ಮಾಧ್ಯಮಗಳು ತಪ್ಪು ಮತ್ತು ಸುಳ್ಳು ಮಾಹಿತಿಗಳು ಹೆಚ್ಚು ಹಂಚಿಕೆ ಮಾಡುತ್ತಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಡಾ. ಸುಧಾಕರ ಅವರು ಮಾತನಾಡುತ್ತಾ ಪ್ರತಿಯೊಂದು ವೃತ್ತಿಯಲ್ಲಿ ಪ್ರತಿಭೆ ಇರುತ್ತದೆ. ಅದನ್ನು ಉಪಯೋಗ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಿ. ಉತ್ತಮವಾದ ಜೀವನ ರೂಪಿಸಿಕೊಳ್ಳಿ. ಸಮಾಜಕ್ಕೆ ಗೌರವ ತಂದುಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕರಾದ ಇಮಾಮ್ ಹುಸೇನ್ ಅವರು ಮಾತನಾಡುತ್ತಾ ಇಂದು ಮಕ್ಕಳಿಗೆ ಪುಸ್ತಕ ಹಿಡಿದರೆ ನಿದ್ದೆ ಬರುತ್ತೆ, ಆದರೆ ಮೊಬೈಲ್ ಹಿಡಿದರೆ ಬಹಳ ಚುರುಕು ಆಗುತ್ತಾರೆ. ಇಂದು ಯುವಕರು ಯು ಟ್ಯೂಬ್ ಚಾನಲ್ ಪ್ರಾರಂಭ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಪುಸ್ತಕಗಳನ್ನು ಓದುವುದರಿಂದ ಜಾಣರಾಗುತ್ತಾರೆ ಹೇಳಿದರು.
ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ರುದ್ರವ್ವ ಹಟ್ಟಿಹೊಳಿ ಅವರು ಮಾತನಾಡುತ್ತ ನಾವು ಚನ್ನಾಗಿ ಇರುವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾ ಅರ್ಥಶಾಸ್ತ್ರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಅವರು ತಂತ್ರಜ್ಞಾನದ ಯುಗಕ್ಕೆ ನಾವು ಹೊಂದಾಣಿಕೆ ಆಗಲೇಬೇಕು. ಸಂಪರ್ಕ ಮಾಡಲು ಮಾಧ್ಯಮಗಳು ಬೇಕು. ಎಲ್ಕದಕ್ಕೂ ಇತಿ ಮಿತಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅಕ್ಕಮ್ಮ, ಅನಿಲ ಕುಮಾರ, ಅಡಿವೆಪ್ಪ, ಅನ್ನಪೂರ್ಣ ಗೊಸಬಾಳ, ಉಮೇಶ್ ಗಾಳೆಪ್ಪ, ಡಾ. ಗೊಡ್ಲಯ್ಯ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಗ್ಯಮ್ಮ ನಿರೂಪಿಸಿದರು. ಶರಣಮ್ಮ ಪ್ರಾರ್ಥಿಸಿದರು, ಶಾಹಿನ್ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















