ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಶ್ರೀ ಶಿವಯೋಗಿ ಸಿದ್ದವೀರ ಸ್ವಾಮಿ ಗುರುಕುಲ ಶಾಲೆಯ ವಿದ್ಯಾರ್ಥಿಯಾದ ಕು.ಓಂಕಾರ ಶಿವರಾಜ ೬೧೭/೬೨೫ (೯೮.೭೩%) ಅಂಕಗಳೊಂದಿಗೆ ತೇರ್ಗಡೆಯಾಗಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ ೮ ನೆ ರ್ಯಾಂಕ್ ಪಡೆದಿರುತ್ತಾನೆ. ಅದರಂತೆ ಕಲ್ಪನಾ ೯೩.೬೫%.ನವೀನ ೯೦.೪೦. ಉತ್ತಮವಾದ ಫಲಿತಾಂಶ ನೀಡಿರುತ್ತಾರೆ. ಒಟ್ಟು ಶಾಲೆಯಲ್ಲಿ ೪೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಅದರಲ್ಲಿ ಡಿಸ್ಟಿಂಕ್ಷನ್ ೦೬, ಪ್ರಥಮ ಶ್ರೇಣಿಯಲ್ಲಿ, ೨೫ ದ್ವೀತಿಯ ಶ್ರೇಣಿಯಲ್ಲಿ ೦೮’, ತೃತೀಯ ಶ್ರೇಣಿಯಲ್ಲಿ ೦೪, ಈ ಫಲಿತಾಂಶವನ್ನು ಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೂ ಶಿಕ್ಷಕರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಷ.ಬ್ರ.ರಾಜೇಶ್ವರ ಶಿವಾಚಾರ್ಯರು ಹಾಗೂ ಕಾರ್ಯದರ್ಶಿಗಳಾದ ಶ್ರೀ ಗುರುಶಾಂತ ಹಿರೇಮಠ ಮತ್ತು ಮುಖ್ಯ ಗುರುಗಳಾದ ಶ್ರೀ ಓಂಕಾರೇಶ್ವರ ವಿಶ್ವನಾಥಮಠ ರವರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















