ಸುರಪುರ ಸುದ್ದಿ : ಅಖಿಲ ಕರ್ನಾಟಕ ಹೆಳವ ಸಮಾಜ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಪ್ರಸ್ತುತ 2025 – 26 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಹೆಳವ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಕಕ್ಕೇರಾ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಯಿತು .
ಕಾರ್ಯಕ್ರಮದ ಪೂರ್ವ ಸಿದ್ಧತೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳೊಂದಿಗೆ ಮೇ 31 ಭಾನುವಾರದಂದು ಕಕ್ಕೇರಾ ಪಟ್ಟಣದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಹೆಚ್.ಎನ್. ಗೋಗಿ, ಬಸವರಾಜ ಹೆಳವರ ಯಾಳಗಿ, ಶಿವಶರಣಪ್ಪ ಕನ್ನೊಳ್ಳಿ, ಚಂದಪ್ಪ ಕಕ್ಕೇರಿ, ರಾಯಪ್ಪ ಹೊಸೂರ, ಡಾ:ಹಣಮಂತರಾಯ ಹಳಿಸಗರ, ರಾಘವೇಂದ್ರ ಮಾಸ್ತರ, ನೆಹರೂ ಹಳಿಸಗರ, ಭೀಮರಾಯ ಹೆಳವರ ಯಾಳಗಿ, ಶ್ರೀಕಾಂತ್ ಯಾಳಗಿ, ಪರಮಣ್ಣ ಹೆಳವರ, ವಿರೇಶ್ ಮಾಸ್ತರ , ಸೋಮು ಹೆಳವರ, ಪರಶುರಾಮ್ ಮುದನೂರ, ರಾಜು ಮಾಸ್ತರ , ಮೌನೇಶ ಹೆಳವರ, ರಾಜು ಹೆಳವರ, ಶಿವರಾಜ ಹೆಳವರ, ಶಿವು ಹೆಳವರ, ಯಲ್ಲಪ್ಪ ಹೆಳವರ, ರಮೇಶ್ ಹೆಳವರ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಸುದ್ದಿ




















