ಮಡಿಕೇರಿ : ನಗರದ ಗಾಂಧಿ ಮೈದಾನದ ಗ್ಯಾಲರಿ ಒಳಗೆ ಸುಮಾರು, 40 ಜನರ ತಮಿಳುನಾಡಿನ ಪ್ರವಾಸಿಗರ ತಂಡವೊಂದು ಮೈದಾನದ ಒಳಗೆ ಗ್ಯಾಸ್ ಸಿಲಿಂಡರ್ ಸ್ಟವ್ ಸೇರಿದಂತೆ ಪಾತ್ರೆಗಳನ್ನು ಬಳಸಿ ಅಡುಗೆ ಮಾಡುತಿದ್ದರು ಈ ಬಗ್ಗೆ ಸಾರ್ವಜನಿಕರು ನಗರ ಸಭಾ ಉಪಾಧ್ಯಕ್ಷ ಮಹೇಶ್ ಜೈನಿಯವರ ಗಮನ ಸೆಳೆದ ತಕ್ಷಣ ಕಾರ್ಯಪ್ರವೃತ್ತರಾದ ಉಪಾಧ್ಯಕ್ಷ ಮಹೇಶ್ ಜೈನಿ , ನಗರಸಭಾ ಹೆಲ್ತ್ ಇನ್ಸ್ ಪೆಕ್ಟರ್ ಸುರೇಶ್ ಸಿಬ್ಬಂದಿ ಬೂತ್ ರಾಜ್ ಮತ್ತು ರಂಗಪ್ಪ ರವರೊಂದಿಗೆ ಮೈದಾನಕ್ಕೆ ತೆರಳಿ ಪ್ರವಾಸಿಗರಿಂದಲೇ ಪೂರ್ತಿ ಮೈದಾನವನ್ನು ಶುಚಿಗೊಳಿಸಿ ಶುಚಿತ್ವದ ಬಗ್ಗೆ ಅರಿವು ಮೂಡಿಸಿ ರೂ 2.000 ದಂಡ ವಿಧಿಸಿದರು.
ವರದಿ: ಪ್ರಿತುನ್ ಪೂವಣ್ಣ




















