ಕೊಪ್ಪಳ / ಕಾರಟಗಿ: ತಾಲೂಕಿನ ಸಿಂಗನಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ ದೇವತೆಯಾದ ಶ್ರೀ ಕರಿಯಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿ ಹಾಗೂ ದೇವಸ್ಥಾನದ ಕಮಿಟಿ ರಚಿಸುವ ಉದ್ದೇಶದಿಂದ ದಿನಾಂಕ: 29/05/2026 ಶುಕ್ರವಾರದಂದು ಗ್ರಾಮದ ಹಿರಿಯರ ಸಮಯದ ಸಂಯೋಗದೊಂದಿಗೆ ಶ್ರೀ ಕರಿಯಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಮಹತ್ವದ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಗ್ರಾಮದ ಹಿರಿಯರು, ಯುವಕರು ಹಾಗೂ ಗ್ರಾಮದ ಸಮಸ್ತ ಭಕ್ತಾದಿಗಳು ಭಾಗವಹಿಸಿ ದೇವಸ್ಥಾನದ ಮುಂದಿನ ಕಾರ್ಯ ಚಟುವಟಿಕೆಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಕಮಿಟಿ ರಚನೆ ಕುರಿತು ಚರ್ಚೆ ನಡೆಸುವುದು ಹಾಗೂ ಕಮಿಟಿ ರಚನೆ ಮಾಡಲಾಗುವುದು.
ಆದ್ದರಿಂದ ಗ್ರಾಮದ ಎಲ್ಲಾ ಭಕ್ತಾದಿಗಳು ಹಾಗೂ ಸಾರ್ವಜನಿಕರು ತಪ್ಪದೇ ಸಭೆಯಲ್ಲಿ ಭಾಗವಹಿಸಿ ಸಹಕರಿಸಬೇಕಾಗಿ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.




















