ಮಹಾಲಿಂಗಪುರ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ‘ಶಬ್ದವೇದಿ ಯಲ್ಲಣ್ಣ ವಡ್ಡರ ವೃತ್ತ’ವನ್ನು ನಿರ್ಮಿಸಬೇಕೆಂದು ಆಗ್ರಹಿಸಿ ಜೂನ್ 24 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಬೃಹತ್ ರಸ್ತೆ ತಡೆ ಚಳುವಳಿ ಹಾಗೂ ಮಾನವ ಸರಪಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪ್ರತಿಭಟನಾ ಸಮಿತಿಯು ಮಹಾಲಿಂಗಪುರ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಅಧಿಕೃತ ಪತ್ರದ ಮೂಲಕ ಮನವಿ ಸಲ್ಲಿಸಿದೆ. ಕಳೆದ ಜೂನ್ 14 ರಂದು ವೃತ್ತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಈ ಹೋರಾಟದ ಭಾಗವಾಗಿ ಅಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರತಿಭಟನಾ ಮಾರ್ಗ:
ಪ್ರತಿಭಟನಾ ಮೆರವಣಿಗೆಯು ಅಂಬೇಡ್ಕರ್ ಸರ್ಕಲ್ನಿಂದ ಪ್ರಾರಂಭವಾಗಿ, ಗಾಂಧಿ ಸರ್ಕಲ್ ಮೂಲಕ ಚೆನ್ನಮ್ಮ ಸರ್ಕಲ್ಗೆ ತಲುಪಲಿದೆ. ಅಲ್ಲಿಂದ ನೇರವಾಗಿ ಶಬ್ದವೇದಿ ಯಲ್ಲಣ್ಣ ವಡ್ಡರ ಸರ್ಕಲ್ನಲ್ಲಿ ವೃತ್ತಾಕಾರದ ಮಾನವ ಸರಪಳಿ ನಿರ್ಮಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈ ಪ್ರತಿಭಟನೆಯಲ್ಲಿ ಬೆಂಬಲ ನೀಡುವ ಸಂಘ-ಸಂಸ್ಥೆಗಳು
ರೈತ ಸಂಘ, ಮಹಾಲಿಂಗಪುರ
ಡಾ|| ಬಿ.ಆರ್. ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘ, ಮಹಾಲಿಂಗಪುರ.
ನೇಕಾರ ಸಂಘ, ಮಹಾಲಿಂಗಪುರ
ಶಿವಸೇನಾ ಸಂಘಟನೆ ಮಹಾಲಿಂಗಪುರ
ಕೂಲಿ ಕಾರ್ಮಿಕರ ಸಂಘ, ಮಹಾಲಿಂಗಪುರ
ಅಸಂಘಟಿತ ದಿನಗೂಲಿ ಕಾರ್ಮಿಕರ ಸಂಘ, ಮಹಾಲಿಂಗಪುರ
ವಿದ್ಯಾರ್ಥಿ ಸಂಘಟನೆಗಳು, ಮಹಾಲಿಂಗಪುರ
ಸಾಮಾಜಿಕ ಚಿಂತಕರ ವೇದಿಕೆ, ಮಹಾಲಿಂಗಪುರ
ವಿಕಲಚೇತನರ ಸಂಘ, ಮಹಾಲಿಂಗಪುರ
ಸ್ವತಂತ್ರ ಸೇನಾನಿ ಬೆಳವಡಿ ವಡ್ಡರ ಯಲ್ಲಣ್ಣ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ವೇದಿಕೆ ಮುಖಂಡರು.
ಕರ್ನಾಟಕ ರಾಜ್ಯ ಭೋವಿ (ವಡ್ಡರ) ಮಹಾಸಭಾ ರಾಜ್ಯ ವೇದಿಕೆ ಮುಖಂಡರು, ಬೆಂಗಳೂರು.
ಕರ್ನಾಟಕ ಭೋವಿ (ವಡ್ಡರ) ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷರು ಗೌತಮ ವಂಕಿ ಆನೇಕಲ್ (ಬೆಂಗಳೂರು.)
ಅಖಿಲ ಕರ್ನಾಟಕ ಭೋವಿ (ವಡ್ಡರ) ಯುವ ವೇದಿಕೆ ಬೆಂಗಳೂರು.
ಶ್ರೀ ಸಿದ್ರಾಮೇಶ್ವರ ಭೋವಿ (ವಡ್ಡರ) ಸಮಾಜ ಸೇವಾ ಸಂಘ, ಮಹಾಲಿಂಗಪುರ
ಸರ್.ಎಮ್. ವಿಶ್ವೇಶ್ವರಯ್ಯ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಮಹಾಲಿಂಗಪುರ
ಚನ್ನದಾಸರ ಸಮಾಜ ಮಹಾಲಿಂಗಪುರ.
ಮತ್ತು ಇತರೆ ಸ್ವ-ಇಚ್ಛಾ ಪ್ರತಿಭಟನಾ ಪ್ರಜೆಗಳು
ಅಧಿಕಾರಿಗಳ ಉಪಸ್ಥಿತಿಗೆ ಆಗ್ರಹ:
ಪ್ರತಿಭಟನಾ ಸ್ಥಳಕ್ಕೆ ರಬಕವಿ-ಬನಹಟ್ಟಿ ತಹಶೀಲ್ದಾರರು ಹಾಗೂ ಜಮಖಂಡಿ ಜಿಲ್ಲಾ ಉಪವಿಭಾಗಾಧಿಕಾರಿಗಳು (ಎ.ಸಿ) ಖುದ್ದಾಗಿ ಆಗಮಿಸಿ ತಮ್ಮ ಮನವಿಯನ್ನು ಸ್ವೀಕರಿಸಬೇಕು.
ಪುರಸಭೆ ಮುಖ್ಯಾಧಿಕಾರಿಗಳು ಈ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಾರ್ವಜನಿಕರ ಅಹವಾಲು ಆಲಿಸಲು ವ್ಯವಸ್ಥೆ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಪ್ರಮುಖವಾಗಿ ಒತ್ತಾಯಿಸಿದ್ದಾರೆ. ಮಹಲಿಂಗಪುರದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ನಾಗರಿಕ ಹೋರಾಟವಾಗುವ ಸಾಧ್ಯತೆಯಿದೆ.
– ಕರುನಾಡ ಕಂದ ಸುದ್ದಿ




















