ಕೊಟ್ಟೂರು: ಪಟ್ಟಣದ ರಾಜೀವ್ ನಗರದ ಸವಿತಾ ಸಮಾಜ ಸಂಘಟನೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.
ಅಧ್ಯಕ್ಷ ಬಿ.ಸತೀಶ. ಗೌರವಧ್ಯಕ್ಷ ನಾಗಶೇಷಲು ಎಮ್. ಉಪಾಧ್ಯಕ್ಷರು ಸುಧೀರ್ ಬಿ. ಕಾರ್ಯದರ್ಶಿ ಹನುಮಂತ ಕೆ ಎಚ್. ಖಜಾಂಚಿ ಹನುಮಂತ ಎಚ್ . ನೂತನ ಪಧಾದಿಕಾರಿಗಳಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ಸತೀಶ್ ಮಾತನಾಡಿ ಸಮುಧಾಯದವರು ಸಂಘಟನೆ ಮತ್ತು ಒಗ್ಗಟ್ಟಿನಿಂದ ಸಾಗಿದಾಗ ನಮ್ಮ ಸಮಾಜಕ್ಕೆ ಸರ್ಕಾರಗಳ ನೀಡಿರುವ ಸರ್ಕಾರದ ಸೌಲಭ್ಯಗಳನ್ನು ನಮ್ಮ ಸವಿತ ಸಮಾಜದ ಪ್ರತಿಯೊಬ್ಬ ಫಲಾನುಭಾವಿಗಳು ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಪಡೆದುಕೊಳ್ಳಬಹುದು.
ಹಾಗೂ ಸಮುಧಾಯದವರನ್ನು ಒಗ್ಗೂಡಿಸಿಕೊಂಡು ಸಂಘಟನೆ ಬೆಳವಣೆಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನೂತನ ಎಲ್ಲಾ ಪಧಾದಿಕಾರಿಗಳು ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸವಿತಾ ಸಮಾಜ ಸಂಘಟನೆಯ ಸರ್ವ ಸದಸ್ಯರು ಇದ್ದರು
ವರದಿ: ಕೆ. ಗೋಣೆಪ್ಪ




















