ತುರಿದೆನು ಬಿಳಿ ಮೂಲಂಗಿ ರಾಯತಕ್ಕೆ
ತಂದೆನೆರಡು ಗುಲಾಬಿಗಳ ಅಂಗಳಕ್ಕೆ
ಇರಿಸಲು ಪುಟ್ಟ ಹೂಗಳ ಅಲಂಕಾರಕ್ಕೆ
ಹಸಿರ ಗರಿಗಳು ಸಂಮೃದ್ಧ ಚೇತನಕ್ಕೆ
ಅರಳಿತು ಚಿತ್ತಾರ ಕ್ರಿಯಾಶೀಲ ಜೋಡಣೆಯಲಿ
ಮೂಡಿತು ಲಘು ಕಾವ್ಯ ಪದಪುಂಜಗಳಲಿ
ಬರುತಿದೆ ಸುಮನಗಳಲ್ಲಿಗೆ ನಲ್ಮುಂಜಾವಲಿ
ಆರಂಭಿಸಲು ನಿತ್ಯ ಕಲಾಪಗಳ ಸಂತಸದಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















