ಕೊಟ್ಟೂರು: ಪಟ್ಟಣದ ರಾಜೀವ್ ನಗರದ ಎಚ್ ಪಕ್ಕೀರಪ್ಪ ರವರು ಸಮಾಜ ಸೇವೆಯಲ್ಲಿ ತೊಡಗಿ ಗುರುವಾರ ಜೆ ಪಿ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮಹಾನ್ ವ್ಯಕ್ತಿಗಳ 4
ಭಾವಚಿತ್ರಗಳನ್ನು ಉಡುಗೊರೆಯಾಗಿ ನೀಡಿ ಮಾತನಾಡಿ ಈ ಸರಕಾರಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು, ದೇಶಕ್ಕೆ ಮಡಿದ ಹೋರಾಟಗಾರರನ್ನು ನೆನೆಯಬೇಕು ಸಮಾಜದಲ್ಲಿ ಮಕ್ಕಳು ಸಮಾಜ ಘಾತುಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೆ ಸಮಾಜಕ್ಕೆ ಪ್ರತಿದಿನವೂ ನೆಮ್ಮದಿ ಹಾಗೂ ಶಾಂತಿಯಿಂದ ಜೀವನ ನೆಡಸಲು ಕಾರಣೀಕರ್ತರಾಗರಬೇಕು, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆ ಹಾಗೂ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿಕೊಂಡು ಮಹಾನ್ ವ್ಯಕ್ತಿಗಳಾಗಿ ಈ ಸರಕಾರಿ ಶಾಲೆಗೆ ಹಾಗೂ ಶಿಕ್ಷಕರಿಗೂ ವಿದ್ಯಾರ್ಥಿಗಳು ಕೀರ್ತಿ ತರುವಂತಾಗಲಿ ಎಂದು ಹೇಳಿದರು.
ಸಮಾಜ ಸೇವಕರಾಗಿ ಈ ಶಾಲೆಗೆ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಉಡುಗೊರೆಯಾಗಿ ನೀಡಿದ ಎಚ್ ಪಕ್ಕೀರಪ್ಪರವರಿಗೆ ಶಾಲೆಯ ಮುಖ್ಯ ಗುರುಗಳು ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಗುರುಗಳು ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು.
ವರದಿ: ಕೆ. ಗೋಣೆಪ್ಪ




















