ಬೆಂಗಳೂರು: ಇದೇ ಬರುವ ಶನಿವಾರ 12-9-2026 ರಂದು ಬೆಳಿಗ್ಗೆ 10 ಘಂಟೆಗೆ ಕವಿಮಂ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಶ್ರೀ ಎಸ್. ಗಿರೀಶ್, ಆರ್ ಶ್ರೀನಾಗೇಶ, ಲೆಕ್ಕಾಧಿಕಾರಿ ಭಾಗ್ಯ ಎ. ಅವರ ಉಪಸ್ಥಿತಿಯಲ್ಲಿ ನಮ್ಮ ಸಂಘದ ಸದಸ್ಯೆ, World Archery level 1 coach, ಸಹಾಯಕ ಲೆಕ್ಕಾಧಿಕಾರಿಯಾದ ಕೀರ್ತನಾ ಅವರಿಗೆ ಭಾರತದಲ್ಲಿ, ಜಪಾನ್, ದಕ್ಷಿಣ ಆಫ್ರಿಕಾ ದೇಶಗಳಲ್ಲಿಯೂ ಸಹ ಭಾರತವನ್ನು ಪ್ರತಿನಿಧಿಸಿ, ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅನೇಕ ಬಂಗಾರದ ಪದಕ ಗಳಿಸಿರುವ ದೀಪಾ ಅಜಯ್ ಅವರಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮದ ನಂತರ ಫಣಗಿರಿ ಪ್ರತಿಷ್ಠಾನದಿಂದ KPTCL ನಿವೃತ್ತ ಇಂಜಿನಿಯರ್ ಜಿ. ಮೃತ್ಯುಂಜಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಎಂ. ದೇವರಾಜ್ ಭಟ್ ಅವರಿಂದ ಪ್ರಸಂಗ ಪರಿಶೀಲನೆ ಪುಸ್ತಕ ಬಿಡುಗಡೆ, ನಮ್ಮ ಸಂಘದ ಸದಸ್ಯ ನಿವೃತ್ತ ಲೆಕ್ಕಾಧಿಕಾರಿ ದಿನೇಶ ಉಪ್ಪೂರ್ ಅವರಿಂದ ಅಂತರ್ಜಾಲ ತಾಣ ಲೋಕಾರ್ಪಣೆ ಹಾಗೂ ಶ್ರೀ ಬಿ ಎಸ್ ಗುರುಪ್ರಸಾದ್ ಅವರಿಗೆ ಪಣಗಿರಿ ಪುರಸ್ಕಾರ ನಂತರ ವೀರ ಬಾರ್ಬರಿಕ ಯಕ್ಷಗಾನ ಕಾರ್ಯಕ್ರಮ ಜರುಗಲಿದೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು




















