ಹುನಗುಂದ: ಪಟ್ಟಣದ ಹೊನ್ನಕುಸುಮ ಸಾಹಿತ್ಯ ವೇದಿಕೆಯಡಿ ಪ್ರತಿ ತಿಂಗಳು ನಡೆಯುವ ತಿಂಗಳ ಬೆಳಕು ಮಾಲಿಕೆಯ 34ನೇ ಕಾರ್ಯಕ್ರಮವು ಇಲ್ಲಿನ ವಿ.ಎಂ.ಎಸ್.ಆರ್.ವಿ.(ವಸ್ತ್ರದ) ಪದವಿ ಮಹಾವಿದ್ಯಾಲಯದಲ್ಲಿ ಜುಲೈ 26 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ.
ಲೇಖಕರ ಸಮ್ಮುಖದಲ್ಲಿ ಚರ್ಚೆ, ವಿಶ್ಲೇಷಣೆ, ವಿಮರ್ಶೆ ಹಾಗೂ ಓದುಗರೊಂದಿಗೆ ಸಂವಾದ ನಡೆಯಲಿದೆ. ಬಾಗಲಕೋಟೆಯ ಕಥೆಗಾರ ಉಮೇಶ್ ತಿಮ್ಮಾಪುರ ಅವರ ಕಗ್ಗಲ್ಲ ಕ್ರಾಸ್ ಕಥಾಸಂಕಲನ ಚರ್ಚೆ ನಡೆಯಲಿದ್ದು, ಕೃತಿ ಕುರಿತು ಗದುಗಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕವಿತಾ ಜಂಗವಾಡ ಮಾತನಾಡಲಿದ್ದಾರೆ ಎಂದು ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರಕಟಣೆ ತಿಳಿಸಿದೆ.
- ಕರುನಾಡ ಕಂದ ಸುದ್ದಿ




















