
” ವಿಜಯಾದ್ರಿ ಪರ್ವತ ” ಕೊಪ್ಪಳ ಜಿಲ್ಲೆಯ ಹೊಸಳ್ಳಿ ಹತ್ತಿರವಿರುವ ಕಾಸನಕಂಡಿ ಎಂಬಲ್ಲಿದೆ.
ಇದು ತುಂಗಭದ್ರಾ ಜಲಾಶಯದ ಹಿನ್ನೀರಿನ ಸಮೀಪದಲ್ಲಿರುವ ಒಂದು ಸುಂದರವಾದ ಬೆಟ್ಟ ಮತ್ತು ಧಾರ್ಮಿಕ ಕ್ಷೇತ್ರವಾಗಿದೆ.
ಇದು ಪ್ರಕೃತಿ ರಮಣೀಯ ತಾಣವಾಗಿದೆ. ಬೆಟ್ಟದ ಮೇಲಿರುವ ಶ್ರೀ ವೀರಾಂಜನೇಯ ದೇವಸ್ಥಾನವು ಅತ್ಯಂತ ಸುಂದರವಾದದ್ದು.

ಈ ದೇವಸ್ಥಾನದಲ್ಲಿ ಅಖಂಡ ರಾಮಾಯಣವನ್ನು ದಿನಾಂಕ 16-11-2022 ರಿಂದ ಇವತ್ತಿನವರೆಗೂ ಪಠಣ ಮಾಡುತ್ತಿದ್ದಾರೆ. ಪ್ರತಿ ದಿನ ಇಪ್ಪತ್ತು ನಾಲ್ಕು ಗಂಟೆ ಅಖಂಡ ರಾಮಾಯಣವನ್ನು ಪಠಣ ಮಾಡುತ್ತಿದ್ದಾರೆ.
ಇಲ್ಲಿಂದ ತುಂಗಭದ್ರಾ ನದಿಯ ಹಿನ್ನೀರಿನ ಅದ್ಭುತ ನೋಟ ಕಣ್ಣಿಗೆ ಮುದ ನೀಡುತ್ತದೆ. ಪ್ರಕೃತಿ ಪ್ರೇಮಿಗಳು ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಬಯಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.
ಈ ಅದ್ಬುತ ತಾಣಕ್ಕೆ ಕೊಪ್ಪಳ-ಭಾಗ್ಯನಗರದ ಅಡವಿ ಆಂಜನೇಯ ದೇವಸ್ಥಾನದ ಹತ್ತಿರ ಆಂಜಿನೇಯ ಬಡಾವಣೆ ವಾಕಿಂಗ್ ಗೆಳೆಯರ ಬಳಗದಿಂದ ರವಿವಾರ ವಿಜಯಾದ್ರಿ ಪರ್ವತಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಚಾರಣದಲ್ಲಿ ವಾಕಿಂಗ್ ಗೆಳೆಯರ ಬಳಗದ ಮಂಜುನಾಥ್ ತಿಮ್ಮಲಾಪುರ, ವಿದ್ಯಾಧರ, ಶಿವಾನಂದ, ಕಳಕಯ್ಯ, ಯೋಗಾನಂದ, ದುರಗಪ್ಪ ಮತ್ತು ಸಂತೋಷ ದರ್ನ ಹಾಗೂ ಇತರರು ಪಾಲ್ಗೊಂಡಿದ್ದರು.
ಇಂತಹ ಅದ್ಬುತವಾದ ಪ್ರಕೃತಿ ಮತ್ತು ಧಾರ್ಮಿಕ ಸ್ಥಳಕ್ಕೆ ನೀವು ಒಮ್ಮೆ ಹೋಗಿ ಬನ್ನಿ.




















