ರವಿವಾರ ಸಿಂಧನೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿ ಟ್ರಸ್ಟ್ ಹಾಗೂ ಮೌನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಅನದಾನ ಕೋರಿ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಶಾಸಕ ನಾಡಗೌಡ ಸರ್ಕಾರ ಜೊತೆ ಚರ್ಚಿಸಿ ಅನುದಾನ ನೀಡಲು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ, ಶ್ರೀ ಕಾಳಿಕಾದೇವಿ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಕೊಟ್ನೆಕಲ್,ಉಪಾದ್ಯಕ್ಷರಾದ ಶಣ್ಮುಖ ಆಚಾರಿ,ಕಾರ್ಯದರ್ಶಿ ಬಸವರಾಜ ಕಮತಗಿ,ಸದಸ್ಯರಾದ ಗಣೇಶ ಸುಕಲಪೇಟೆ,ಆನಂದ ಮೂರ್ತಿ,ಆನಂದ ಮೂರ್ತಿ, ಮೌನೇಶ ಭಾಗ್ಯಪ್ಪ,ಬಸವರಾಜ ಸಾಲುಗುಂದ, ಪ್ರಸನ್ನ ಪತ್ತಾರ ಇನ್ನಿತರರು ಉಪಸ್ಥಿತರಿದ್ದರು.




















