ಅನಂತದೆಡೆಗೆ ಗುರಿ ಇರಲು
ಕರ್ಮಯೋಗಿ ಹುಟ್ಟಿ ಬಂದಿಹರು
ಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರು
ಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬ
ನಾಮ ಹಲವು ಎಂದು ಸಾರಿದವರು
ಸ್ವಾರ್ಥ, ಭ್ರಷ್ಟಾಚಾರ, ಹಿಂಸೆ
ಅತ್ಯಾಚಾರ ಇರುವಲ್ಲಿ
ಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿ
ಉನ್ನತ ಮಟ್ಟದ ಸಮಾಜ ಏಳ್ಗೆಯ
ಹಗಲಿರುಳೆನ್ನದೆ ಕಾಯಕವೇ ಕೈಲಾಸವೆನುತಾ ಶ್ರಮಿಸುತಾ ದೇವರಾಗಿಹರು
ಕಲ್ಪತರು ನಾಡಿನ ಯೋಗಿ, ಸಿದ್ದಿಪುರುಷ
ಕಲಿಯುಗದ ಮಹಾಯೋಗಿವರ್ಯರು ನಮ್ಮ ಶ್ರೀಗಳು ಸಿದ್ದಗಂಗಾ ತಪ್ಪಲಿನಲಿ ನೆಲಸಿಹರು
ಭಕ್ತರ ಪಾಲಿನ ಸಂಜೀವಿನಿಯಾಗಿಹರು
ಸದಾ ಶ್ರೀಗಳ ಆಶೀರ್ವಾದ ಬೇಡುವೆವು
- ಪರಿಮಳ ಸತೀಶ್, ತುಮಕೂರು




















