ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಉಪವಿಭಾಗ ಹೆಸ್ಕಾಂ ಕಚೇರಿ ಆವರಣದಲ್ಲಿ ಡಾ||ಬಿ. ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಆಚರಿಸಲಾಯಿತು. ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಪ್ರತಿ ವರ್ಷ ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿ ಅಥವಾ ಭೀಮ್ ಜಯಂತಿ ಎಂದು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
ಭಾರತದಾದ್ಯಂತ ಮತ್ತು ಜಾಗತಿಕವಾಗಿ ಆಚರಿಸಲಾಗುವ ಏಪ್ರಿಲ್ 14 ಅಂಬೇಡ್ಕರ್ ಜಯಂತಿಯು ಕೇವಲ ಸ್ಮರಣಾರ್ಥವಲ್ಲ, ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರಬಲ ಆಚರಣೆಯಾಗಿದೆ. ಇದು ಅವರ ಕೊಡುಗೆಗಳ ಮೇಲಿನ ಆಳವಾದ ಗೌರವವನ್ನು ಪ್ರತಿಬಿಂಬಿಸುತ್ತದೆ.
ಈ ಸಂದರ್ಭದಲ್ಲಿ ಹೆಸ್ಕಾಂನ ಎಲ್ಲಾ ಉನ್ನತ ಅಧಿಕಾರಿಗಳಿಗೂ ಹಾಗೂ ನೌಕರರಿಗೂ, ಪವರ್ ಮೆನ್ ಗಳಿಗೂ, ವಿದ್ಯುತ್ ಗುತ್ತಿಗೆದಾರರಿಗೂ ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೂ ಕರ್ನಾಟಕ ರಾಜ್ಯ ಛಲವಾದಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಚಿದಾನಂದ ಕಾಂಬಳೆ ಇವರು ಸನ್ಮಾನಿಸಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶ್ರೀ ಎಸ್ ಎ ಬಿರಾದಾರ EE (Ele),
ಶ್ರೀ ಎಸ್ ಆರ್ ಮೆಡೆದಾರ AEE, ಶ್ರೀ ಎಸ್ ಬಿ ಶಿರಗೂರ AEE, ಶ್ರೀ ಪಿ ಎಮ್ ಸಾಗನೂರ AEE,
ಶ್ರೀ ರಾಕೇಶ ಗಜಾಕೋಶ AE, ಶ್ರೀ ಶಂಕರ ಡಮಾಮಿ AE, ಶ್ರೀ ಪ್ರಶಾಂತ ಪಾಟೀಲ CEC (659),
ಸಂತೋಷ ಬನಗೊಂಡ, ಚಿದಾನಂದ ಕಾಂಬಳೆ ರಾಜ್ಯಾಧ್ಯಕ್ಷರು ಕ.ರಾ.ಛ.ನೌ.ಸಂಘ, ಜೆ ಎಸ್ ಭಜಂತ್ರಿ,
ಉಮೇಶ ಸೋಲಾಪುರ JE, ಪರಶುರಾಮ ಭಮಗೊಂಡ JE, ಹೆಚ್ ಎಸ್ ಹೊಸಮನಿ, ರಾಮನಗೌಡ ಇಬ್ರಾಹಿಂಪೂರ, ಎಸ್ ಆರ್ ಅವಟಿ
ಶಾಂತು ತೆನ್ನೆಳ್ಳಿ, ಮಹೇಶ ಗೊಳಸಾರ, ಪ್ರಶಾಂತ ಹೂಗಾರ, ಆನಂದ ಚಾಂದಕವಟೆ, ಆನಂದ ಕುಂಬಾರ
ಡಿ ಜಿ ಕುಂಬಾರ, ಜಿ ಎಸ್ ಕಾರಂತ, ಮುದಕಪ್ಪ ಕುಂಬಾರ, ಚನ್ನಬಸಪ್ಪಗೌಡ ಪಾಟೀಲ, ವಿಠ್ಠಲ ಬಡಿಗೇರ, ಸಿದ್ದರಾಮ ರೂಗಿ, ವಿರೇಶ ತಾರನಾಳ,
ಬಸು ಕುಂಬಾರ,ಶರೀಪ್ ಪಾಸ್ವಾಡಿ,ಪ್ರದೀಪ ಗವಳಿ
ರವಿ ಕಾಳೆ ,ಶ್ರೀಮತಿ ಅಕ್ಷತಾ ಲಮಾಣಿ,
ಶ್ರೀಮತಿ ಶಿಲ್ಪಾದೇವಿ ಇಟಗಿ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು.
- ಕರುನಾಡ ಕಂದ




















