ಬಳ್ಳಾರಿ / ಕಂಪ್ಲಿ : ಪಟ್ಟಣದ ಬಳ್ಳಾರಿ ರಸ್ತೆಯ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ರಸ್ತೆಯವರೆಗೆ ಲೋಕೋಪಯೋಗಿ ಇಲಾಖೆ (PWD) ವತಿಯಿಂದ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, 11 ಕೆವಿ ವಿದ್ಯುತ್ ಮಾರ್ಗಗಳ ಸ್ಥಳಾಂತರ ಹಾಗೂ ಕಂಬಗಳ ಮರುಜೋಡಣೆ ಕಾರ್ಯ ಕೈಗೊಳ್ಳಲಾಗಿದೆ.
ಇದೇ ವೇಳೆ ಕೃಷಿ ತರಬೇತಿ ಕೇಂದ್ರದ ಎದುರಿನ 110 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ಹಾಗೂ ಸಿಬ್ರಿದಿನ್ ಪ್ರದೇಶದಲ್ಲಿ ಎಲ್.ಟಿ ಲೈನ್ ದುರಸ್ತಿ ಕಾರ್ಯ ನಡೆಯಲಿರುವುದರಿಂದ, ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯದ ಸಮಯ :
ದಿನಾಂಕ: 25-04-2026
ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 6:00 ಗಂಟೆಯವರೆಗೆ.
ಬಾಧಿತ ಪ್ರದೇಶಗಳು :
F2 ಕಂಪ್ಲಿ ಟೌನ್: ಕಂಪ್ಲಿ ಕೋಟೆ, ಮುಖ್ಯ ಬಜಾರ್, ಮುದ್ದಾಪುರ ಅಗಸಿ, ಬೆಳಗೋಡ್ ಅಗಸಿ
F12 ಬಸವೇಶ್ವರ ನಗರ: ಬಸವೇಶ್ವರ ನಗರ, ಎಲ್ಲಮ್ಮ ಕ್ಯಾಂಪ್, ನಂ.10 ಮುದ್ದಾಪುರ
F6 ವಿದ್ಯಾಪೀಠ: ಸಂಬಂಧಿತ ಎಲ್ಲಾ ಪ್ರದೇಶಗಳು
ಐಪಿ ಸೆಟ್ ಸಮಯ ಬದಲಾವಣೆ
F3-ಬೆಳಗೋಡಲ್, F4-ರಾಮಸಾಗರ, F5-ಗೌರಮ್ಮ ಕೆರೆ, F5-ಜಾನೂರು, F7-ಸಾನಾಪುರ, F1-ದೇವಸಮುದ್ರ, F8-ಕೆ.ಟಿ ಪುರ ಮತ್ತು F9-ಮಾಸ್ತೂರಗಟ್ ಪ್ರದೇಶಗಳ ಐಪಿ ಸೆಟ್ಗಳಿಗೆ ಬೆಳಿಗ್ಗೆ 4:00 ರಿಂದ 11:00 ಗಂಟೆಯವರೆಗೆ ಮಾತ್ರ ವಿದ್ಯುತ್ ಲಭ್ಯವಿರಲಿದೆ.
ಸಾರ್ವಜನಿಕರು ಹಾಗೂ ರೈತರು ಈ ಅನಿವಾರ್ಯ ವಿದ್ಯುತ್ ವ್ಯತ್ಯಯಕ್ಕೆ ಸಹಕರಿಸುವಂತೆ ಜೆಸ್ಕಾಂ ಇಲಾಖೆ ಮನವಿ ಮಾಡಿದೆ.
ವರದಿ : ಜಿಲಾನಸಾಬ್ ಬಡಿಗೇರ್




















