
ವಿರಾಜಪೇಟೆ :ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಟರ್ಫ್ ಮೈದಾನವನ್ನು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಎ. ಎಸ್. ಪೊನ್ನಣ್ಣ ರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಮನೆ ಶಾಸಕರು, ಕ್ರೀಡೆಯನ್ನು ಪ್ರೋತ್ಸಾಹಿಸುವುದು ಸರಕಾರದ ಹಾಗೂ ತನ್ನ ಕರ್ತವ್ಯವಾಗಿದ್ದು, ಕ್ರೀಡೆಗೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ನೀಡಿರುವ ಕೊಡಗಿನ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಸರಕಾರದ ಹಾಗೂ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಉತ್ತಮ ಸೌಲಭ್ಯ ನೀಡಿದಲ್ಲಿ ನಾಡಿನ ಮತ್ತಷ್ಟು ಯುವ ಕ್ರೀಡಾಪಟುಗಳು ಮುನ್ನೆಲೆಗೆ ಬರಲು ಸಹಕಾರಿಯಾಗುತ್ತದೆ ಎಂದು ಹೇಳಿದ ಮಾನ್ಯ ಶಾಸಕರು, ತನ್ನ ಅವಧಿಯಲ್ಲಿ ಕ್ರೀಡೆಗಾಗಿ ನೀಡಿದ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಸದ್ರಿ ಟರ್ಫ್ ಮೈದಾನದ ಸದ್ಬಳಕೆ ಮಾಡಿ ಕ್ರೀಡಾ ಜಗತ್ತಿನಲ್ಲಿ ಹೆಸರು ಪಡೆಯುವಂತೆ ಯುವಜನತೆಗೆ ಕರೆ ನೀಡಿದ ಮಾನ್ಯ ಶಾಸಕರು, ಮೈದಾನದ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲ್ಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷರು ಮಂಜುಳಾ, ಕುಶಾಲನಗರ ಬ್ಲಾಕ್ ಅಧ್ಯಕ್ಷರು ವಿ ಪಿ ಶಶಿಧರ್, ಅಜಿತ್ ಅಯ್ಯಪ್ಪ, ಕಲಿದ್, ಸಮದ್, ರಾಜಶೇಖರ್, ತೆರೇಸಾ ವಿಕ್ಟರ್, ಅಜ್ಜಿಕುಟ್ಟಿರ ಪೊನ್ನು, ವಿ ಟಿ ವಾಸು, ನಾಯಂದಿರ ಶಿವಾಜಿ, ಬಶೀರ್, ಅಬ್ದುಲ್ ರೆಹಮಾನ್, ಶರತ್, ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೋಮಣ್ಣ, ಅಂಕಿತ್ ಪೊನ್ನಪ್ಪ, ಸರ್ಫು, ಮಹಾದೇವ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ವರದಿ: ಪ್ರಿತುನ್ ಪೂವಣ್ಣ ಅಯ್ಯನೆರವಂಡ




















