ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗುರುಗಳ ಪಾದ ಪೂಜೆಯೊಂದಿಗೆ ಗುರುವಂದನಾ ಕಾರ್ಯಕ್ರಮ

ಕೊಪ್ಪಳ : ಕಾರಟಗಿ ತಾಲೂಕಿನ ಬೂದುಗುಂಪ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಸಂಭ್ರಮದಿಂದ ಗುರುವಂದನಾ ಕಾರ್ಯಕ್ರಮವನ್ನು 2006-2007 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ ಕಾರ್ಯಕ್ರಮವನ್ನು ನೆರವೇರಿಸಿದರು.
ಶ್ರೀ ಭೀಮೇಶ ತಾತನವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಶ್ರೀ ಸಿದ್ದೇಶ್ವರ ಸ್ವಾಮಿಗಳು ಕೊಟ್ಟೂರೇಶ್ವರ ಮಠ ಬೂದಗುಂಪ ಇವರ ಸಾನಿಧ್ಯದಲ್ಲಿ ಕಾರ್ಯಕ್ರಮ ನೆರವೇರಿತು. ನಂತರ ಮಾತನಾಡಿದ ಶ್ರೀಗಳು ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಸದ್ಯ ಹೆಚ್ಚಿನ ಜನರ ದೈನಂದಿನ ಜೀವನವು ಗಡಿಬಿಡಿ ಮತ್ತು ತೊಂದರೆಗಳಿಂದ ಸುತ್ತುವರೆದಿದೆ ಜೀವನದಲ್ಲಿ ಮನಃಶಾಂತಿ ಮತ್ತು ಆನಂದವನ್ನು ಪಡೆಯಲು ಯಾವ ಸಾಧನೆಯನ್ನು ಮಾಡಬೇಕು ಮತ್ತು ನಿರ್ದಿಷ್ಟವಾಗಿ ಹೇಗೆ ಮಾಡಬೇಕು ಎಂಬುದರ ಯಥಾರ್ಥ ಜ್ಞಾನವನ್ನು ಕೊಡುವವರೇ ಗುರುಗಳು !ಆದರೆ ಇಂದು ಸಮಾಜ ಮಾತ್ರ ಗುರುಗಳ ಮಹತ್ವವನ್ನು ಮರೆಯುತ್ತಾ ಹೋಗುತ್ತಿದೆ. ಗ್ರಂಥಗಳಲ್ಲಿ ವರ್ಣಿಸಿದ ಗುರು ಮಹಿಮೆಯನ್ನು ಓದಿದ ಜಿಜ್ಞಾಸುಗಳಿಗೆ ಮತ್ತು ಸಾಧಕರಿಗೆ ಗುರುಗಳ ಬಗ್ಗೆ ಶ್ರದ್ದೆ ನಿರ್ಮಾಣವಾಗುವುದು.
ಶಿಷ್ಯನ ಜೀವನದಲ್ಲಿ ಗುರುಗಳ ಮಹತ್ವವು ಅಸಾಧಾರಣವಾಗಿದೆ, ಏಕೆಂದರೆ ಗುರುಗಳಿಲ್ಲದೆ ಅವನಿಗೆ ಈಶ್ವರ ಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಗುರುಗಳ ಭಕ್ತವತ್ಸಲ ರೂಪ, ದಯಾಳು ದೃಷ್ಟಿ, ಶಿಷ್ಯನ ಮೇಲೆ ಕೃಪೆ ಮಾಡುವ ಮಾಧ್ಯಮಗಳು ಮುಂತಾದ ಬೇರೆಬೇರೆ ರೀತಿಯಲ್ಲಿ ಶಿಷ್ಯನಿಗೆ ಗುರುಗಳ ಅಂತರಂಗದ ನಿಜವಾದ ದರ್ಶನವು ಈ ಗ್ರಂಥದಿಂದ ಆಗುವುದು. ಇದರಿಂದ ಗುರುಗಳ ಮೇಲಿನ ಶಿಷ್ಯನ ಭಕ್ತಿಯು ದೃಢವಾಗುವುದು ಮತ್ತು ಅವನು ಗುರುಗಳ ಅಸ್ತಿತ್ವದ ಹೆಚ್ಚೆಚ್ಚು ಲಾಭ ಪಡೆದುಕೊಳ್ಳಬಹುದು ಎಂದರು.


ಭೀಮೇಶ್ ತಾತನವರು ಮಾತನಾಡಿ ಮನೆಯಲ್ಲಿ ತಂದೆ ತಾಯಿ ಬಂಧು ಬಳಗದೊಂದಿಗೆ ಸಂಸ್ಕಾರ ಕೊಟ್ಟರೆ, ಶಿಕ್ಷಕರು ಜಗತ್ತಿನ ಶಿಕ್ಷಣದ ಸಂಸ್ಕಾರವನ್ನು ಕೊಡುತ್ತಾರೆ, ಶಿಕ್ಷಣದ ಸಂಸ್ಕಾರವೇ ವಿದ್ಯಾರ್ಥಿಯ ಜೀವನದ ಮೆಟ್ಟಲು ಎಂದರು. ನಂತರದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮಾತನಾಡಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ಗುರುಗಳಿಗೆ ಸನ್ಮಾನ ಕಾರ್ಯಕ್ರಮ :
ವಿಶೇಷವಾಗಿ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಪಾದ ಪೂಜೆ ಮಾಡುವ ದೃಶ್ಯ ವೇದಿಕೆಗೆ ಶೋಭೆ ನೀಡಿತು.
ವಿದ್ಯಾರ್ಥಿಗಳಿಂದ ಶಿಕ್ಷಕ, ಶಿಕ್ಷಕರಿಗೆ ಪಾದಪೂಜೆ ಕಾರ್ಯಕ್ರಮ ನೆರವೇರಿಸಿ ಶಿಕ್ಷಕ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದಂತ ಶ್ರೀ ಬಸವರಾಜ ಕರಾಟೆ, ಶ್ರೀ ರಾಜಶೇಖರ್, ಶ್ರೀರಾಮಚಂದ್ರಪ್ಪ ಚಿತ್ರಗಾರ, ಶ್ರೀ ರಾಮರಾವ್ ಕುಲಕರ್ಣಿ, ಶ್ರೀ ವೆಂಕಟೇಶ ದೇಸಾಯಿ, ಶ್ರೀ ಸೋಮಪ್ಪ, ಶ್ರೀಮತಿ ಮಂಜುಳ, ಶ್ರೀಮತಿ ಪಾರ್ವತಿ ಭಂಡಾರಿ, ಶ್ರೀಮತಿ ಜ್ಯೋತಿ ಸೇರಿದಂತೆ ಎಲ್ಲಾ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. 2006-2007 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕಾರ್ಯಕ್ರಮವನ್ನು ಸಂತಸ ಸಂಭ್ರಮದಿಂದ ಯಶಸ್ವಿಗೊಳಿಸಿದರು.

ವರದಿ ಯಮನೂರಪ್ಪ ಸಿಂಗನಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!