ನವದೆಹಲಿ: ವಿಕಲಚೇತನ ಉದ್ಯೋಗಿಗಳ ಮುಂಬಡ್ತಿಯಲ್ಲಿ ಮುಂಜಾಗರೂಕತೆ ವಹಿಸದ ಕೆನರಾ ಬ್ಯಾಂಕ್ ಅಧಿಕಾರಿ ವರ್ಗದ ಧೋರಣೆಯನ್ನು ಖಂಡಿಸಿ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ವಿಕಲಚೇತನರ ಮುಖ್ಯ ಆಯುಕ್ತರ ನ್ಯಾಯಾಲಯದಲ್ಲಿ ದಾಖಲಿಸಿದ ಮೊಕದ್ದಮೆಯಲ್ಲಿ ಮುಖ್ಯ ಆಯುಕ್ತರಾದ ಶ್ರೀ ಗೋವಿಂದರಾಜ್ ಅವರು ವಿಚಾರಣೆ ನಡೆಸಿದರು.
ವಿಚಾರಣೆಯಲ್ಲಿ ವಿಕಲಚೇತನ ಉದ್ಯೋಗಿಯು ಸಮರ್ಪಕ ದಾಖಲೆಗಳನ್ನು ಸಲ್ಲಿಸುವಲ್ಲಿ ಕೆಲವು ಲೋಪದೋಷಗಳಿದ್ದು ಅವುಗಳನ್ನು ಮೂವತ್ತು ದಿವಸದ ಒಳಗೆ ಸಲ್ಲಿಸಬೇಕೆಂದು ನ್ಯಾಯಾಲಯವು ತಾಕೀತು ಮಾಡಿತು.
ಈ ಸಂಧರ್ಭದಲ್ಲಿ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಕಾನೂನು ಸಲಹೆಗಾರರಾದ ಅಡ್ವೋಕೇಟ್ ತನ್ವರ್ ಸವಿತಾ ಹಾಜರಿದ್ದು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಹಾಜರಿದ್ದು ಕೋರ್ಟಿನ ಕಾರ್ಯ ಕಲಾಪಗಳನ್ನು ವೀಕ್ಷಿಸಿ ಅಡ್ವೋಕೇಟ್ ತನ್ವರ್ ಸವಿತಾ ಅವರ ಅಮೋಘವಾದ ವೈಖರಿಗೆ ಪ್ರಶಂಸೆ ವ್ಯಕ್ತ ಪಡಿಸಿ ಅವರ ಸಾಮಾಜಿಕ ಸೇವೆಗೆ ಅಭಿನಂದಿಸಿದರು.



















