ಮುಧೋಳ : ಶರಣರ ಸಂತರ ಮಹಾಂತರ ಸಂಗದಲ್ಲಿರಬೇಕು. ಆ ಸಂಗವು ಗಟ್ಟಿಯಾದ ಸಂಭಂಧವಾಗಿರಬೇಕು ಎಂದು ಹಿರಿಯ ಅನುಭಾವಿ ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ 146 ನೇ ರವಿವಾರದ ಸತ್ಸಂಗದಲ್ಲಿ ಪಾಲ್ಗೊಂಡು ಆಶ್ರಮದಿಂದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಅವಶ್ಯಕತೆಗೆ ತಕ್ಕಂತೆ ವೇಷ ಹಾಕುವವರ ಸಂಗ ಬೇಡ. ನಟಿಸುವ ಸಂಬಂಧಗಳು ಎಂದಿಗೂ ಶಾಶ್ವತವಲ್ಲ ಎಂದರು. ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಮಾತನಾಡಿ “ಭಗವಂತನ ನಾಮಸ್ಮರಣೆಯೇ ಬದುಕಿಗೆ ಭೂಷಣ ಎಂದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್. ಶ್ಯಾಮಲಾ ಇದ್ದರು.
- ಕರುನಾಡ ಕಂದ ಪತ್ರಿಕೆ




















