ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ವಿಠೋಬ ಎಸ್ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ. ವಿಠೋಬ ಎಸ್ ಅವರು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಸಿ ಎಮ್ ಎ ಡಾ. ಜೀಲಾನ್ ಭಾಷಾ ವಿ ಅವರ ಮಾರ್ಗದರ್ಶನದಲ್ಲಿ “ ಆನ್ ಎಂಪಿರಿಕಲ್ ಸ್ಟಡಿ ಟು ಆನ್ ಕ್ಯಾಪಿಟಲ್ ಸ್ಟ್ರಕ್ಚರ್ ಡಿಸಿಜೆನ್ಸ್ : ವಿಥ್ ಸ್ಪೆಷಲ್ ರೆಫೆರೆನ್ಸ್ ಟು ಬಿಎಸ್ಇ ಸೆನ್ಸೆಕ್ಸ್ ಕಂಪನೀಸ್” ಎಂಬ ವಿಷಯದ ಕುರಿತು ಸಂಶೋಧನೆ ಮಾಡಿ ವಿಶ್ವವಿದ್ಯಾನಿಲಯಕ್ಕೆ ಮಹಾ ಪ್ರಬಂಧ ಸಲ್ಲಿಸಿದ್ದರು.
ಪ್ರಸ್ತುತ ವಿಠೋಬ ಎಸ್ ಅವರು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಇದಕ್ಕೆ ಮುಂಚೆ ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪರಾಗಿ ಹಾಗೂ ಇರಕಲ್ಲಗಡ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬಯ್ಯಾಪುರ ಗ್ರಾಮದವರು. ಇವರ ತಂದೆ ಶೇಷಪ್ಪ ದಡ್ಡಿಹಾಳ, ತಾಯಿ ಕಮಲಮ್ಮ ದಡ್ಡಿಹಾಳ. ಇವರು ಪ್ರಾಥಮಿಕ ಶಿಕ್ಷಣವನ್ನು ಬಯ್ಯಾಪುರ ಮತ್ತು ಖೈರವಾಡಿಗೆಯಲ್ಲಿ, ಪ್ರೌಢ ಶಿಕ್ಷಣವನ್ನು ಕುಷ್ಟಗಿಯಲ್ಲಿ ಮತ್ತು ಪದವಿಯನ್ನು ರಾಯಚೂರಿನ ಬಿಆರ್ಬಿ ಕಾಲೇಜಿನಲ್ಲಿ ಪಡೆದಿದ್ದಾರೆ. ಇವರು ವಾಣಿಜ್ಯಶಾಸ್ತ್ರದ ಸ್ನಾತ್ತಕೊತರ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾನಿಲಯ, ಕಲಬುರಗಿಯಲ್ಲಿ ಪಡೆದಿದ್ದಾರೆ.
ಇವರು ಪಿಎಚ್.ಡಿ ಪದವಿ ಪಡೆದಿದ್ದಕ್ಕೆ ಇವರ ಕುಟುಂಬವರು, ಗೆಳೆಯರು, ಕಾಲೇಜಿನ ಸಿಬ್ಬಂದಿಗಳು, ಹಿತೈಷಿಗಳು ಅಬಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















