ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಕೂಡ್ಲಿಗಿ ತಾಲೂಕಿನಲ್ಲಿ ಆಗುತ್ತಿರುವ ದಲಿತರ ಮೇಲಾಗುತ್ತಿರುವ ದೌರ್ಜನ್ಯ, ಗಲಾಟೆ, ಜಮೀನು ಕುರಿತು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಹಾಗೂ ತಾಲೂಕಿನ ಜ್ವಲಂತ ದಲಿತರ ಸಮಸ್ಯೆಗಳು ಕುರಿತು ಜೂನ್ 5ನೇ ತಾರೀಕು ಕೂಡ್ಲಿಗಿ ಪಟ್ಟಣದಲ್ಲಿ ಗಾಂಧೀಜಿ ಚಿತಾ ಭಸ್ಮದಿಂದ ಅಂಬೇಡ್ಕರ್ ಸರ್ಕಲ್ ಮತ್ತು ವಾಲ್ಮೀಕಿ ಸರ್ಕಲ್ ತನಕ ಘೋಷಣೆಗಳೊಂದಿಗೆ ತಾಲೂಕು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ಮಾಡಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಕೂಡ್ಲಿಗಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ್, ಜಿಲ್ಲಾ ಹಿರಿಯ ಮುಖಂಡರಾದ ಡಿಎಂ ಈಶ್ವರಪ್ಪ ಸಿದ್ದಾಪುರ ಹಾಗೂ ಗೆದ್ದಲಗಟ್ಟೆ ಬಿ ಹನುಮೇಶ್. ಲೋಕಿಕೆರೆ ಕರಿಬಸಪ್ಪ .ತಾಲೂಕು ಸಂಚಾಲಕರಾದ ಬಡೇಲಡಕು ದುರುಗೇಶ್. ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್ ಕಾನಾಮಡುಗು ಪಕೀರಪ್ಪ. ಬಿ ಮಹೇಶ್ ಕೂಡ್ಲಿಗಿ.ಹೊಸಹಳ್ಳಿ ಕರಬಸಪ್ಪ. ಐಗಳ ಮಲ್ಲಾಪುರ ರಮೇಶ್. ಅಜಯ್ ಕುಮಾರ್ ಕೂಡ್ಲಿಗಿ. ವೀರೇಶ್ ನೆಲ ಬೊಮ್ಮನಹಳ್ಳಿ. ಕೂಡ್ಲಿಗಿ ನಗರ ಸಂಚಾಲಕ ಟಿ ನಾಗರಾಜ್. ಕೂಡ್ಲಿಗಿ ಹೋಬಳಿ ಸಂಚಾಲಕ ಹಿರೇಹೆಗ್ಡಾಳ್ ಪಕೀರಪ್ಪ. ತಾಲೂಕು ಸಮಿತಿ ಸದಸ್ಯರಾದ ಕೆ ಎಂ ಹಳ್ಳಿ. ಕೆಬಿ ಓಬಳೇಶ್. ಕುಮತಿ ಯಲ್ಲಪ್ಪ. ಪೂಜಾರಹಳ್ಳಿ ತಿಪ್ಪೇಶ್. ಎಚ್ ಎಮ್ ಚೌಡೇಶ್ ಸಕಲಪುರದ ಹಟ್ಟಿ..ಟಿಬಿ ಹಟ್ಟಿ ಗಂಗಾಧರ್. ಮಾಡಕ್ನಳ್ಳಿ ನಾಗರಾಜ್. ಬಡೇಲಡಕು ಎಚ್ ಪಿ ದುರ್ಗೇಶ್. ಬಿ ಟಿ ಗುದ್ದಿ ಗ್ರಾಮ ಘಟಕ ಸಂಚಾಲಕ ಚಂದ್ರು.ಜಿ ಬಿ ಹಟ್ಟಿ ಮಲ್ಲಿಕಾರ್ಜುನ. ಇನ್ನೂ ಮುಂತಾದ ಪದಾಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















