ಕಲ್ಬುರ್ಗಿ : ಜಿಲ್ಲೆಯ ಕಾಳಗಿ ತಾಲೂಕಿನ ಮಕರಂಭ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಶನಿವಾರ ಕಾರ್ಯಕ್ರಮ ವಿವರ :
ದಿ.12/5/2026 ರಿಂದ ಪ್ರತಿ ದಿನ ದೀಪೋತ್ಸವ ಮತ್ತು ಕುಂಭ ಪ್ರತಿಷ್ಠಾಪನೆ ತಾಯಿಯ ವಿಶೇಷ ಪೂಜೆ ಹಾಗೂ ಪ್ರಸಾದ,
ದಿ. 14 ರಂದು ವಿಶೇಷ ಪೂಜಾ, 15 ರಂದು ಮುತ್ತೈದೆ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ,
16 ರಂದು ಬಾದಾಮಿ ಅಮಾವಾಸ್ಯೆ ದಿನದಂದು ಗ್ರಾಮ ದೇವತೆಯ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾಜಾ ಬಜಂತ್ರಿ, ಪುರವಂತರ ಸೇವೆ, ಚಿಟಹಲಗೆ ವಾರದ ಡೊಳ್ಳು ಕುಣಿತ ಹೀಗೆ ಹಲವಾರು ಮತ್ತು ವಿವಿಧ ಸಾಂಸ್ಕೃತಿಕ ಮೇಳದೊಂದಿಗೆ ಭವ್ಯ ಮೆರವಣಿಗೆ ಊರ ಪ್ರಮುಖ ಬೀದಿಯಲ್ಲಿ ಜರುಗಿತು.
ಮಕರಂಭ ಗ್ರಾಮದ ಸಮಸ್ತ ಸದ್ಭಕ್ತ ಮಂಡಳಿ ಭಾಗಿಯಾದರು. ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಸಿದ್ಧಾರೂಢ ಬೊಮ್ಮಾಯಿ ಮತ್ತು ಮಲ್ಲು ಹೂಗಾರ , ಮುಕರಂಭ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ಇನ್ನಿತರರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ ಆರ್. ಪಾಟೀಲ್




















