ಸಿರುಗುಪ್ಪ-ತಾಲೂಕಿನ ಬಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀಲಕಂಠ ಕ್ಯಾಂಪ್ ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯ 13.98 ಲಕ್ಷ ರೂ, ವೆಚ್ಚದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದ ಅಡಿಯಲ್ಲಿ ನಿರ್ಮಿಸಲಾಗಿಸುತ್ತಿರುವ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅಡಿಗಲ್ಲು ನೆರವೇರಿಸಿದರು.
ಸಿ ಡಿ ಪಿ ಓ ಪ್ರದೀಪ್, ಮುಖಂಡರಾದ ಬಿ.ಎಂ. ರುದ್ರಮನಿ ಸ್ವಾಮಿ, ನರಸಿಂಹ ನಾಯಕ್, ಶ್ಯಾಮ್ ಸುಂದರ್, ಸುರೇಶ್ ರೆಡ್ಡಿ, ಬಿ.ವೆಂಕಟೇಶ್, ಹೆಚ್.ಗಣೇಶ್, ಪರಮೇಶ್, ನಸುರುದ್ದೀನ್, ಸಾಕ್ಷರತಾ ಅಬ್ದುಲ್ ನಬಿ, ಪವನ್ ದೇಸಾಯಿ, ಬಿ.ಎಂ. ಮಣಿಕಂಠ ನಾಯಕ್, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಶ್ರೀನಿವಾಸ್ ಸೇರಿದಂತೆ ಅಂಗನವಾಡಿ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















