ಶಿರಸಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಸ್ವರಾಂಜಲಿ ಗುರು ಪೂರ್ಣಿಮಾ ವಿಶೇಷ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶ್ರೀ ಗಣಪತಿ ಭಟ್ಟ ವರ್ಗಾಸರ ಅವರು ಮಾತನಾಡುತ್ತಾ , ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಪ್ರಾಮಾಣಿಕವಾಗಿ, ನಿಸ್ಪ್ರಹೆಯಿಂದ ಯಾವುದೇ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಕಲ ವ್ಯವಸ್ಥೆಯನ್ನು , ಸಿದ್ಧತೆಯನ್ನು ಮಾಡಿ ಕಲಾವಿದರನ್ನು, ಕಲಾರಸಿಕರನ್ನು, ಕಲೆಯನ್ನು ಪ್ರೋತ್ಸಾಹಿಸುತ್ತಿರುವ ಬಳಗದ ಮುಖ್ಯಸ್ಥ ಶ್ರೀ ಎಮ್. ಎಸ್. ಹೆಗಡೆಯವರು ಸರಳ ಸಜ್ಜನ ಸಾಂಸ್ಕೃತಿಕ ಸಂಘಟಿಕರಾಗಿದ್ದಾರೆ ಎಂದು ಕೊಂಡಾಡಿದರು.
ಅವರು ಸ್ವರಾಂಜಲಿ ಗುರುಪೂರ್ಣಿಮಾ ವಿಶೇಷ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮ ವ್ಯವಸ್ಥೆ ಮಾಡಿದ ಶ್ರೀ ಎಂ ಎಸ್ ಹೆಗಡೆಯವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.
ಅಂಕಣಕಾರ ಸಾಹಿತಿ ವಾಸುದೇವ ಶಾನಭಾಗ್ ಅವರು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಕುರಿತು ಮಾತನಾಡಿ ಇಂತಹ ಕಾರ್ಯಕ್ರಮ ಜರುಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸ್ವರಾಂಜಲಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಹಾಗೂ ಪ್ರಾಚಾರ್ಯ ಮಹಾಬಲೇಶ್ವರ ಹೆಗಡೆ ಮೂರೂರು , ಪಂಡಿತ್ ವಿನಾಯಕ ಹೆಗಡೆ ಹಿರೇಹದ್ದ ತಮ್ಮ ಮಧುರವಾದ ಗಾಯನದಿಂದ ಸಭಿಕರ ಮನೆಗೆದ್ದರು.
ಡಾ. ಶ್ರೀಶೃತಿ ಹೆಗಡೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















