ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಮೊದಲ ಪ್ರಯೋಗ ಯಶಸ್ವಿ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆಯನ್ನು ಯಶಸ್ವಿಯಾಗಿ ನೆರವೇರಿತು ಕಿತ್ತೂರು ಕ್ಷೇತ್ರ.ಬೈಲಹೊಂಗಲ
.ಖಾನಾಪುರ.ಬೆಳಗಾವಿ
ಗ್ರಾಮೀಣ ಕ್ಷೇತ್ರಗಳ ಗುರಿಯಾಗಿರಿಸಿಕೊಂಡು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳು ಭಾಜಪದ ಚಾಣಕ್ಯ ಎಂದೇ
ಪ್ರಸಿದ್ಧಿಯಾದ ಅಮಿತ್ ಷಾ ಹಾಗೂ ರಾಜಾಹುಲಿ ಯಡಿಯೂರಪ್ಪ.ಮತ್ತು ಭಾಜಪ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲರ ಸಾರಥ್ಯದಲ್ಲಿ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕನ ಅಣತಿಯಂತೆ ಮೊದಲ ಪ್ರಯೋಗ ಯಶಸ್ವಿಯಾಗಿದೆ ಎಂದು ಜೊತೆಗೆ ಮುಂದಿನ ರಣತಂತ್ರಕ್ಕೆ ಬೇಕಾದ ಚಾಕಚಕ್ಯತೆಗೆ ಈ ಸಮಾವೇಶ ಇಂಬು ನೀಡಿದೆ ಎನ್ನಲಾಗುತ್ತಿದ್ದು ಹಲವು ಕಾರಣಗಳಿಂದ ಚದುರಿಹೋಗಿದ್ದ ಪಕ್ಷದ ಚೈತನ್ಯ ಮರಳಿ ಬಂದಂತಾಗಿದೆ ಮುಂದಿನ ಯೋಜನೆಗಳು ಸಲೀಸಾಗಿ ಸಫಲತೆಯ ದಾರಿ ಹಿಡಿಯುವುದರಲ್ಲಿ ಸಂದೇಶಗಳು ಕ್ಷೇತ್ರದಲ್ಲಿ ರವಾನೆಯಾಗಿದೆ ಎಂಬುವುರಲ್ಲಿ ಯಾವ ಅನುಮಾನಗಳಿಲ್ಲ ಎಂಬುವುದು ಸಧ್ಯದ ಭಾರತೀಯ ಜನತಾ ಪಕ್ಷದ ಲೆಕ್ಕಾಚಾರ ಅಭ್ಯರ್ಥಿಗಳು ಯಾರೆ ಆದರೂ ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಬೇಕೆಂದು ಅಮಿತ್ ಷಾ ಅವರ ಖಡಕ್ ಸಂದೇಶ ಕಾರ್ಯಕರ್ತರಿಗೆ ನೀಡಲಾಗಿದ್ದು ಜನರ ಉತ್ಸಾಹ ಕದಲದಂತೆ ಬೇಕಾದ ಯೋಜನೆಗಳು ಕಾರ್ಯರೂಪಕ್ಕೆ ಬರುವ ಮುತ್ಸದ್ದಿತನದ.
ಯೋಜನೆಗಳು.ತಂತ್ರಗಳು.ಪ್ರತಿದ್ವನಿಸಲೂ ಬೇಕಾದ ವೇದಿಕೆಯನ್ನು ಮೂವರು ನಾಯಕರು ರಂಗೇರಿಸಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕನಿಗೆ ಭಾರಿ ಯಶಸ್ಸು ಸಿಕ್ಕಂತಾಗಿದೆ ಎಂಬುವುದು ಕ್ಷೇತ್ರದಲ್ಲಿನ ಜನರ ಅಭಿಪ್ರಾಯ ಕಾರಣ ಇಂತಹ ವಾತಾವರಣ ನಿರ್ಮಾಣವಾಗಲು ದೆಹಲಿಗೆ ಸರ್ಕಸ್ ನಡಿಸಿದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಬೇಕಾದ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ರಣರಂಗದಲ್ಲಿ ಚೆನ್ನಮ್ಮನಂತೆ ಗೆಲುವು ಸುಲಭ ನಮ್ಮದಾಗಲಿದೆ ಎಂಬುವುದು ಭಾರತೀಯ ಜನತಾ ಪಕ್ಷದ ಅತೀ ವಿಶ್ವಾಸದ ನುಡಿಗಳು ಜನರ ಮಧ್ಯೆ ಕಂಡುಬಂದಿತು ಜೊತೆಗೆ ಈ ಹಿಂದಿನ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗುವ ಲಕ್ಷಣಗಳು ದಟ್ಟವಾಗಿವೆ ಎಂಬುವುದು ಬೆಳಗಾವಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಎಲ್ಲಾ ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯವಾಗಿದೆ ಒಟ್ಟಾರೆಯಾಗಿ ಜಿಲ್ಲೆಯ ನಾಯಕರಿಗೆ ಯಾವ ಔಷಧಿ ಬೇಕಾಗಿತ್ತೋ ಅದನ್ನು ಪಡೆದುಕೊಳ್ಳುವಲ್ಲಿ
ಯಶಸ್ವಿಯಾಗಿದ್ದಾರೆ ಎಂಬುವುದಂತು ಸತ್ಯ…

ವರದಿ. ದಿನೇಶಕುಮಾರ ಅಜಮೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ