
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ ಮಠದಲ್ಲಿ 29 ನೇಯ ಜಾತ್ರಾ , ಪುರಾಣ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ನೂತನ ಮಹಾರಥೋತ್ಸವ ಅಂಗವಾಗಿ ಪ್ರತಿ ದಿನ ಪುರಾಣ ಕಾರ್ಯಕ್ರಮ ಸಾಗಿ ಬಂದು ಏ.2 ರಂದು ಶ್ರೀ ಭೀಮಾಂಬಿಕಾದೇವಿಯ ನಾಮಕರಣದ ತೋಟ್ಟಿಲು ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಕಲ್ಲೂರಿನ ಕಲ್ಲಯ್ಯ ಶಾಸ್ತ್ರೀ, ದೇವಗಿರಿಯ ಗಡ್ಡದಮಠದ ಸಿದ್ದಲಿಂಗಯ್ಯ ಶಾಸ್ತ್ರೀ ಅವರು ಅಮ್ಮನ ಜೀವನ ಚರಿತ್ರೆಯ ಬಗ್ಗೆ ಪ್ರವಚನ ನೀಡಿದರು. ಸಂಗೀತಾ ಬಳಗದ ಹಾಲಕೇರಿಯ ಬಡಿಗೇರ ದ್ಯಾಮಣ್ಣ ಗವಾಯಿ, ಸಿದ್ನೇಕೊಪ್ಪದ ಖಾದರಸಾಬ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಈ ವೇಳೆ ಹಿರಿಯರಾದ ವೀರಯ್ಯಸ್ವಾಮಿ ಭದ್ರಾಪೂರಮಠ, ಹಂಚ್ಯಾಲಪ್ಪ ಕಲ್ಲಗೋಡಿ,ಮಲ್ಲಪ್ಪ ಗುಡಿಹಿಂದಲ,ರಾಜಶೇಖರ ರಡ್ಡಿ, ಯಲ್ಲಪ್ಪ ದೇವರಳ್ಳಿ, ಶರಣಬಸಪ್ಪ ದಾನಕೈ,ಮುದಿಯಪ್ಪ ಪೂಜಾರ, ಶರಣಪ್ಪ ಹಾದಿಮನಿ,ಚೆನ್ನಪ್ಪ ತಳವಾರ ,ಕಿರಣ ಗುದ್ಯಾಡಿ, ಶರಣಪ್ಪ ದೊಡ್ಡಮನಿ, ಹೇಮಲತಾ ಪಾಟೀಲ್, ಪ್ರಿಯಾ ರವಿಕಿರಣ್, ಜ್ಯೋತಿ ದೊಡ್ಡಮನಿ, ಜಯಮ್ಮ , ದೇವಮ್ಮ ಭಾವಿಕಟ್ಟಿ, ಶಿಲ್ಪಾ ಭದ್ರಾಪೂರ, ವಿಜಯಲಕ್ಷ್ಮಿ ದಾನಕೈ, ಪ್ರೇಮಾ ಉದ್ದಾರ, ಅನ್ನಪೂರ್ಣ ಕುಡಗುಂಟಿ, ಲಕ್ಷ್ಮೀ ಗುದ್ಯಾಡಿ, ಸುನೀತಾ ದೊಡ್ಡಮನಿ, ಲಕ್ಷ್ಮೀ ಭಾವಿಕಟ್ಟಿ ಸೇರಿದಂತೆ ಇತರರು ಇದ್ದರು. ಈ ವೇಳೆ ಪ್ರಸಾದ ಸೇವೆ ಮಾಡಿದ ಸಕಲ ಸದ್ಭಕ್ತರಿಗೆ ಸನ್ಮಾನಿಸಲಾಯಿತು.
- ಕರುನಾಡ ಕಂದ ಪತ್ರಿಕೆ




















