ಹುನಗುಂದ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕೊಡುವ ೨೦೨೫-೨೬ ನೇ ಸಾಲಿನ ಡಿಜಿ ಮತ್ತು ಐಜಿಪಿ ಪದಕ ಪಡೆದ ಹಾಸನ ಕೆ ಎಸ್ ಆರ್ ಪಿ ೧೧ ನೇ ಬೆಟಾಲಿಯನ್ ದಲ್ಲಿ ಆರ್ ಪಿ ಐ ಆಗಿರುವ ಯಶವಂತಕುಮಾರ ಕೊನೆಸಾಗರ ಶುಕ್ರವಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರಾದ ಡಾ.ಎಂ.ಎ.ಸಲೀಂ ಅವರಿಂದ ಪದಕ ಪಡೆದರು.
ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ. ೩ ನೇ ಬೆಟಾಲಿಯನ್ ಕವಾಯತು ಮೈದಾನದಲ್ಲಿ ಆಕರ್ಷಕವಾಗಿ ಕಾರ್ಯಕ್ರಮ ನಡೆಯಿತು. ಡಿಜಿಪಿಗಳಾದ ಪ್ರಣವ್ ಮೊಹಂತಿ, ಅಲೋಕ್ ಕುಮಾರ್, ಉಮೇಶ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















