ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನಲ್ಲಿ ಎದೆ ನೋವು ಸಹಿಸಲಾರದೆ ವಾಟರ್ ಮ್ಯಾನ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಮೃತ ಎಕಲರ್ ಗ್ರಾಮದ ವಾಟರ್ ಮ್ಯಾನ್ ಸಂಗಮ್ನಾಥ್ (45) ಎಂದು ಗುರುತಿಸಲಾಗಿದೆ. ಶನಿವಾರದಿಂದ ಎದೆ ನೋವಿನಿಂದ ಬಳತ್ತಿದ್ದ ಅವರು ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಗಮ್ನಾಥ್ ಅವರ ಪತ್ನಿ ಶ್ರಾವಣ ಮಾಸದ ಹಿನ್ನೆಲೆ ತೆಲoಗಾಣ ಜನ ಪಾದಯಾತ್ರೆ ಮೂಲಕ ತೆರಳಿದರು ಈ ವೇಳೆ ಮನೆಯಲ್ಲಿ ಸಂಗಮನಾಥ್ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ನೋವು ಕಡಿಮೆಯಾಗಿಲ್ಲ ಎಂದು ತಿಳಿದು ಬಂದಿದೆ ನೋವು ತಾಳಲಾರದೆ ಜಿಗುಪ್ಸೆಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಿ ಸಂಗಮೇಶ ಚಿದ್ರೆ




















