ಮೈಸೂರು: ಹಿಂದೂ ಧರ್ಮದ ಪ್ರಮುಖ, ಪವಿತ್ರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರೀ ಕೃಷ್ಣ ಹಾಗೂ ರಾಧೆಯ ವೇಷಭೂಷಣದೊಂದಿಗೆ ಇಡೀ ದೇಶ ಹಾಗೂ ವಿದೇಶಗಳಲ್ಲಿ ಸಂಭ್ರಮ, ಸಂತಸದಿಂದ ಆಚರಿಸುತ್ತಿದ್ದಾರೆ.
ಈ ಹಬ್ಬವು ನಮ್ಮ ಮಕ್ಕಳಿಗೆ ಧಾರ್ಮಿಕ ಮೌಲ್ಯವನ್ನು ಕಲಿಸುತ್ತದೆ.
ಈ ಹಬ್ಬವನ್ನು ನಂಜನಗೂಡು ತಾಲೂಕಿನ ಮತ್ತು ಪಟ್ಟಣದ ಅತಿ ದೊಡ್ಡ ಉನ್ನತೀಕರಿಸಿದ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಪ್ರಾರ್ಥನಾ ಸಮಯದಲ್ಲಿ ಮಕ್ಕಳ ಅಲಂಕಾರವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.
ಮಕ್ಕಳ ಅಲಂಕಾರದ ಮಾರ್ಗದರ್ಶನವನ್ನು ಎಲ್ ಕೆ ಜಿ ಸಹ ಅತಿಥಿ ಶಿಕ್ಷಕರಾದ ಶಿಲ್ಪ ಶ್ರೀ ಮತ್ತು ಮಾಧುರಿ ಅವರು ವಹಿಸಿದ್ದರು.
ಈ ಜನ್ಮಾಷ್ಟಮಿಯು ಎಲ್ಲರೂ ಗಮನ ಸೆಳೆಯಿತು. ಜನ್ಮಾಷ್ಟಮಿಯನ್ನು ಉದ್ದೇಶಿಸಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರೇಚಣ್ಣನವರು ವಿಸ್ತಾರವಾಗಿ ಮಾತನಾಡಿದರು.




















