ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಪರೀಕ್ಷೆಯಲ್ಲಿ ಬಳ್ಳಾರಿ ಮಹಾ ನಗರ ಗಾಂಧಿನಗರದ ನಾರಾಯಣ ಸಿಓ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ. ಸನಾ ತಬಸ್ಸುಮ್ ತಂದೆ ಎ. ಮೊಹಮ್ಮದ್ ರಫಿ ಶೇ.94.4% ರಷ್ಟು 472/500 ಅತ್ಯುತ್ತಮ ಅಂಕ ಪಡೆಯುವ ಮೂಲಕ ತೆರ್ಗಡೆಯಾಗಿ ಸಾಧನೆ ಮಾಡಿದ್ದಾರೆ
ಸಿರುಗುಪ್ಪ ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜೀಲ್ ಸಾಮಾಜಿಕ ಕಾರ್ಯಕರ್ತ ಅಲ್ಹಾಜ್ ಎ.ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರ ಮೊಮ್ಮಗಳು, ಹಾಜಿ ಎ. ಮೊಹಮ್ಮದ್ ಇಬ್ರಾಹಿಂ, ಎ. ಮೊಹಮ್ಮದ್ ನೌಷಾದ್ ಅಲಿ ಇವರ ಸಹೋದರನ ಮಗಳು ಎ.ಸನಾ ತಬಸ್ಸುಮ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ಶೈಕ್ಷಣಿಕ ವರ್ಷ ಆರಂಭದಿಂದಲೇ ಎ.ಸನಾ ತಬಸ್ಸುಮ್ ಆಸಕ್ತಿಯಿಂದ ಓದಿರುವುದಕ್ಕೆ ಪರೀಕ್ಷೆ ಬರೆದಿರುವುದಕ್ಕೆ ಯಶಸ್ವಿಗೆ ದೊರೆತಿರುವ ಗೌರವಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.
ಹಾಗೂ ನಾರಾಯಣ ಸಿಓ ಶಾಲೆಯ ಆಡಳಿತ ವರ್ಗದ ಕೋರ್ಡೀನ್ ಸುರೇಂದ್ರ ರೆಡ್ಡಿ, ಎಜಿಎಂ ಶೇಕ್ ಬಾಷಾ,ಪ್ರಾಂಶುಪಾಲರು ರಾಮಕೃಷ್ಣ ಮತ್ತು ಶಾಲೆಯ ಶಿಕ್ಷಕಿ ತುಲಿಕಾ, ಶಿಕ್ಷಕರು ರಾಹುಲ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















