ತುಮಕೂರು/ಮಧುಗಿರಿ :
ಇಂದು ಮಾದರ ಮಹಾ ಸಭಾ ಮಧುಗಿರಿ ತಾಲ್ಲೂಕು ಶಾಖೆ ವತಿಯಿಂದ ಐಡಿ ಹಳ್ಳಿ ಹೋಬಳಿ ಮಟ್ಟದ ಸದಸ್ಯತ್ವ ಅಭಿಯಾನ ಸಂಬಂಧಿಸಿದಂತೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಗೋಪಾಲಯ್ಯ ಎನ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಎಸ್ ಡಿ ಕೃಷ್ಣಪ್ಪ, ಕಾರ್ಯದರ್ಶಿ ಶಿವಣ್ಣ ಟಿ ತೆರೆಯೂರು, ಖಜಾಂಚಿ ರಮೇಶ್ ಎಸ್ ಆರ್, ಸದಸ್ಯರಾದ ಶ್ರೀ ನರಸಿಂಹ ಮೂರ್ತಿ, ವೆಂಕಟೇಶ್, ಅಶ್ವತ್, ಬಾಲೂ, ಯುವರಾಜ್, ಶಿವ ಶಂಕರ, ರಾಮಾಂಜಿ, ನಾಗರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ ದಿನೇಶ್ ಕೆ.


















